ರಾಷ್ಟ್ರೀಯ

ಚಾಯ್‌ವಾಲ ಪ್ರಧಾನಿಯಾಗಿದ್ದು ಕಾಂಗ್ರೆಸ್ ಗೆ ಹೊಟ್ಟೆಕಿಚ್ಚು: ಪ್ರಧಾನಿ ಮೋದಿ

Pinterest LinkedIn Tumblr


ಅಂಬಿಕಾಪುರ: ಜವಾಹರಲಾಲ್‌ ನೆಹರು ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ನಿಜವಾಗಿಯೂ ಸ್ಥಾಪಿಸಿದ್ದಾರೆ ಗಾಂಧಿ ಕುಟುಂಬದ ಹೊರತಾದ ವ್ಯಕ್ತಿಯೊಬ್ಬರನ್ನು ಕಾಂಗ್ರೆಸ್‌ನ ಅಧ್ಯಕ್ಷರಾಗಿ ನೇಮಿಸಿ ಅವರು 5 ವರ್ಷ ಪೂರೈಸಲಿ ಕಾಂಗ್ರೆಸ್‌ಗೆ ಪ್ರಧಾನಿ ನರೇಂದ್ರ ಮೋದಿ ಸವಾಲು ಹಾಕಿದ್ದಾರೆ.

ಛತ್ತೀಸಗಡದ ಅಂಬಿಕಾಪುರದಲ್ಲಿನ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರಲ್ಲದೆ, ಕಾಂಗ್ರೆಸ್‌ ನಾಯಕರು ಮಾಡುತ್ತಿರುವ ಆರೋಪಗಳಿಗೆ ಉತ್ತರ ನೀಡಿದರು.

ಈ ಚಾಯ್‌ವಾಲ ಪ್ರಧಾನಿಯಾಗಿದ್ದನ್ನು ಕಾಂಗ್ರೆಸ್‌ ಇನ್ನೂ ಸಹಿಸಿಕೊಂಡಿಲ್ಲ. ಕಳೆದ ನಾಲ್ಕೂವರೆ ವರ್ಷದಿಂದ ಅವರಿಗೆ ಸಾಮಾನ್ಯ ಚಾಯ್‌ವಾಲ ಪ್ರಧಾನಿಯಾಗಿದ್ದನ್ನು ಅರಗಿಸಿಕೊಳ್ಳಲೇ ಆಗುತ್ತಿಲ್ಲ. ಅವರು ಇದೀಗ ಒಬ್ಬ ಮಹಾನ್‌ ವ್ಯಕ್ತಿಯಿಂದ ನಾನು ಪ್ರಧಾನಿಯಾಗಿದ್ದೇನೆ ಎಂದು ಹೇಳಿಕೆ ನೀಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಮಧ್ಯಪ್ರದೇಶ ಹಾಗೂ ಛತ್ತೀಸಗಡವನ್ನು ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ವಿಭಾಗಿಸಿದ್ದರು. ಅಂದಿನಿಂದ ಇಂದಿನ ವರೆಗೂ ಎರಡು ರಾಜ್ಯಗಳು ಅಭಿವೃದ್ಧಿ ಪಥದಲ್ಲೇ ಸಾಗಿದೆ. ಆದರೆ ತೆಲಂಗಾಣವನ್ನು ಕಾಂಗ್ರೆಸ್‌ ವಿಭಾಗಿಸಿತು. ಸಾಕಷ್ಟು ಸಮಸ್ಯೆ ಇದೀಗ ಎದುರಾಗಿದೆ ಎಂದು ಟೀಕಿಸಿದರು.

ದೇಶದ ಯಾವುದೇ ವ್ಯಕ್ತಿ ನೋಟ್‌ ಬ್ಯಾನ್‌ ವಿಚಾರದಲ್ಲಿ ದುಃಖ ಅಥವಾ ವ್ಯಥೆ ಪಡುತ್ತಿಲ್ಲ. ಆದರೆ ಇಡೀ ದೇಶದಲ್ಲಿ ಒಂದು ಪರಿವಾರ ಮಾತ್ರ ತೀವ್ರ ದುಃಖದಲ್ಲಿದೆ ಎಂದು ಮೋದಿ ಲೇವಡಿ ಮಾಡಿದರು.

Comments are closed.