ರಾಷ್ಟ್ರೀಯ

ರಾಮಮಂದಿರ: ಶೇ.50ರಷ್ಟು ಕೆತ್ತನೆ ಕಾರ್ಯ ಪೂರ್ಣ

Pinterest LinkedIn Tumblr


ರಾಮಮಂದಿರ- ಬಾಬ್ರಿ ಮಸೀದಿ ನಿರ್ಮಾಣ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ ಬಾಕಿ ಇದ್ದು, ಸೋಮವಾರ ಈ ಅರ್ಜಿಯನ್ನು ತುರ್ತು ಆದ್ಯತೆ ನೆಲೆಯಲ್ಲಿ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್‌ ಒಪ್ಪಿಲ್ಲ. 2.77 ಎಕರೆ ಪ್ರದೇಶ ವಿವಾದಲ್ಲಿದೆ.

ಯೋಜನೆಯಂತೆ 268 ಚದರ ಅಡಿ ಉದ್ದ, 140 ಅಡಿ ಅಗಲ ಹಾಗೂ 128 ಅಡಿ ಎತ್ತರದ ರಾಮ ಮಂದಿರ ನಿರ್ಮಾಣಕ್ಕೆ ಅಣಿಗೊಳಿಸಲಾಗಿದೆ. ಒಟ್ಟಾರೆ 212 ಸ್ತಂಭಗಳನ್ನು ಬಳಸಲಾಗುತ್ತದೆ. ಪ್ರತಿ ಸ್ತಂಭದಲ್ಲಿ 16 ಪ್ರತಿಮೆಗಳಿರಲಿದ್ದು, ಈ ಕೆಲಸಗಳು ಪೂರ್ಣಗೊಂಡಿವೆ ಎಂದು ಅವರು ಹೇಳಿದ್ದಾರೆ.

ಪ್ರಸ್ತುತ ಮೊದಲಿನಂತೆ ಹಣ ಬಿಡುಗಡೆಯಾಗುತ್ತಿಲ್ಲ. ಪ್ರಸ್ತುತ ಇಬ್ಬರು ಶಿಲ್ಪಿಗಳು ಹಾಗೂ ಕೆಲ ನೌಕರರಷ್ಟೇ ಕೆಲಸ ನಿರ್ವಹಿಸುತ್ತಿದ್ದಾರೆ. ಕೆಲ ಸಮಯದ ಹಿಂದೆ ಸುಮಾರು 150ಕ್ಕೂ ಅಧಿಕ ಮಂದಿ ಕೆಲಸ ನಿರ್ವಹಣೆ ಮಾಡುತ್ತಿದ್ದರು. ಅಮವಾಸ್ಯೆ ದಿನ ಹೊರತು ಪಡಿಸಿ, ಉಳಿದ ದಿನಗಳಲ್ಲಿ ಶಿಲ್ಪಿಗಳು ಬೆಳಗ್ಗೆ 7ರಿಂದ 5ರ ವರೆಗೆ ಕೆಲಸ ಮಾಡುತ್ತಾರೆ. ಶಂಕುಸ್ಥಾಪನೆ ನಡೆದ ಬಳಿಕ ಮಂದಿರ ಸಂಪೂರ್ಣವಾಗಲು 3-4 ವರ್ಷ ಬೇಕಾಗಬಹುದು ಎಂದು ಸೋಂಪುರ ಅವರು ಹೇಳಿದ್ದಾರೆ.

ಶೀಘ್ರದಲ್ಲಿ ರಾಮ ಮಂದಿರ ನಿರ್ಮಾಣ ಮಾಡಲು ಎಲ್ಲ ಸಿದ್ಧತೆ ನಡೆಸಲಾಗಿದೆ. ಸಂವಿಧಾನ ಬದ್ಧವಾಗಿಯೇ ಇದನ್ನು ರಚಿಸಲಾಗುವುದು. ದೀರ್ಘಕಾಲದ ಬಿಕ್ಕಟ್ಟು ಇದಾಗಿದ್ದು, ಚುನಾವಣೆಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಉತ್ತರ ಪ್ರದೇಶ ವಿಶ್ವಹಿಂದು ಪರಿಷದ್‌ನ ವಕ್ತಾರ ಶರದ್‌ ಶರ್ಮ ಹೇಳಿದ್ದಾರೆ.

ರಾಮಾಯಣದ ಶ್ಲೋಕಗಳನ್ನು ಕಲ್ಲಿನಲ್ಲೂ ಕೆತ್ತಲಾಗಿದ್ದು ವಿಶೇಷ ಕೆತ್ತನೆಗಳನ್ನೂ ಮಾಡಲಾಗುತ್ತದೆ. ಆಗ್ರಾ, ರಾಜಸ್ಥಾನದ ಬನ್ಸಿ ಪಹ್ರಾಪುರ ಇನ್ನಿತರ ಭಾಗದಿಂದ ವಿಶೇಷ ರೀತಿಯ ಮಾರ್ಬಲ್‌ಗಳನ್ನು ಬಳಕೆ ಮಾಡಲಾಗುತ್ತಿದೆ ಎಂದು ಸೋಂಪುರ್ ಹೇಳಿದ್ದಾರೆ

Comments are closed.