ರಾಷ್ಟ್ರೀಯ

ಛತ್ತೀಸ್​ಗಡ: ದೂರದರ್ಶನ ಕ್ಯಾಮರಮನ್​ ಬಲಿಪಡೆದ ವಾರದ ಅಂತರದಲ್ಲಿಯೇ ಎರಡನೇ ಬಾರಿಗೆ ನಕ್ಸಲ್ ದಾಳಿ

Pinterest LinkedIn Tumblr


ಛತ್ತೀಸ್​ಗಡ: ನಕ್ಸಲ್​ ಇರಿಸಿದ್ದ ಬಾಂಬ್ (ಐಇಡಿ)​ ಸಿಡಿದು ಸಿಐಎಸ್​ಎಫ್​ ಸೈನಿಕರು ಸೇರಿ ನಾಲ್ವರು ಅಸುನೀಗಿದ ಘಟನೆ ಛತ್ತೀಸ್​ಗಡದ ದಾಂಡೇವಾಡ ಜಿಲ್ಲೆಯಲ್ಲಿ ಗುರುವಾರ ಸಂಭವಿಸಿದೆ.

ಕೇವಲ ಎಂಟು ದಿನದ ಹಿಂದೆಯಷ್ಟೇ ಇದೇ ಇದೇ ನಕ್ಸಲ್​ ಪೀಡಿತ ಪ್ರದೇಶದಲ್ಲಿ ನಕ್ಸಲ್​ ನಡೆಸಿದ ಗುಂಡಿನ ದಾಳಿಗೆ ದೂರದರ್ಶನದ ಕ್ಯಾಮರಮನ್​ ಸೇರಿ ಇಬ್ಬರು ಪೊಲೀಸ್​ ಸಿಬ್ಬಂದಿ ಬಲಿಯಾಗಿದ್ದರು. ಅ.30ರಂದು ಈ ಘಟನೆ ನಡೆದ ಎಂಟೇ ದಿನಕ್ಕೆ ಮತ್ತೆ ನಕ್ಸಲರು ನಾಲ್ವರು ಮಂದಿಯನ್ನು ಬಲಿ ತೆಗೆದುಕೊಂಡಿದ್ದಾರೆ.
ಮುಂದಿನ ತಿಂಗಳು ವಿಧಾನಸಭಾ ಚುನಾವಣೆ ನಡೆಯುವ ಮುನ್ನ ಈ ದಾಳಿ ನಡೆದಿದೆ. ನಕ್ಸಲ್​ಪೀಡಿತ ಎಂಟು ಜಿಲ್ಲೆಗಳಲ್ಲಿ ಒಟ್ಟು 18 ವಿಧಾನಸಭೆ ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ನವೆಂಬರ್​ 12ರಂದು ಚುನಾವಣೆ ನಡೆಯಲಿದೆ. ಉಳಿದ 72 ಕ್ಷೇತ್ರಗಳಿಗೆ ನವೆಂಬರ್​ 20ರಂದು ಎರಡನೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಡಿಸೆಂಬರ್ 11ರಂದು ಫಲಿತಾಂಶ ಹೊರಬೀಳಲಿದೆ. ವಿರೋಧ ಪಕ್ಷವಾಗಿರುವ ಕಾಂಗ್ರೆಸ್​ ಬಿಜೆಪಿಯಿಂದ ಅಧಿಕಾರವನ್ನು ಮರಳಿ ಪಡೆಯಲು ಸಕಲ ರೀತಿಯಲ್ಲೂ ಪ್ರಯತ್ನಿಸುತ್ತಿದೆ. 2003ರಿಂದಲೂ ಮುಖ್ಯಮಂತ್ರಿ ರಮಣ್ ಸಿಂಗ್ ನೇತೃತ್ವದಲ್ಲಿ ಬಿಜೆಪಿ ಅಧಿಕಾರದಲ್ಲಿದೆ.

ನಕ್ಸಲ್​ಪೀಡಿತ ಪ್ರದೇಶದಲ್ಲಿ ಮೊದಲ ಹಂತದ ಮತದಾನ ನಡೆಯಲು ಇನ್ನು ನಾಲ್ಕು ದಿನಗಳು ಮಾತ್ರ ಬಾಕಿ ಉಳಿದಿದೆ. ಈ ವೇಳೆಯೇ ವಾರದ ಅಂತರದಲ್ಲಿ ನಕ್ಸಲರು ಎರಡು ಬಾರಿ ದಾಳಿ ನಡೆಸಿದ್ದಾರೆ.

Comments are closed.