ರಾಷ್ಟ್ರೀಯ

ಉತ್ತರ ಪ್ರದೇಶದ ಜನರಿಗೆ ಹೊಡೆಯಿರಿ ಎಂದು ವಿವಾದ ಸೃಷ್ಟಿಸಿದ ಬಿಜೆಪಿ ಸಂಸದನ ನಕಲಿ ಹೇಳಿಕೆ

Pinterest LinkedIn Tumblr


ಲಖನೌ: ಉತ್ತರ ಪ್ರದೇಶ ಮತ್ತು ಬಿಹಾರದ ಜನತೆಗೆ ಹೊಡೆಯಿರಿ ಎಂದಿರುವ ಬಿಜೆಪಿ ಸಂಸದನ ನಕಲಿ ಹೇಳಿಕೆಯೊಂದು ಸ್ಥಳೀಯ ಪತ್ರಿಕೆಯಲ್ಲಿ ಪ್ರಕಟವಾಗಿ ವಿವಾದ ಸೃಷ್ಟಿಸಿದ್ದು, ಸಂಸದರ ವಿರುದ್ಧ ಜನಾಭಿಪ್ರಾಯ ವ್ಯಕ್ತವಾಗಿದೆ.

ಸಂಸದರು ಹೇಳಿದ್ದಾರೆ ಎನ್ನಲಾದ ನಕಲಿ ಹೇಳಿಕೆಯ ಪತ್ರಿಕಾ ಕ್ಲಿಪ್ಪಿಂಗ್ ಅನ್ನು ನಿಜವೆಂದು ನಂಬಿದ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಮತ್ತಿತರರು ಕೂಡ ಬಿಜೆಪಿ ಸಂಸದ ರಮೇಶ್‌ ಬಿಧೂರಿ ವಿರುದ್ಧ ಕಿಡಿಕಾರಿದ್ದಾರೆ.

ಬಿಜೆಪಿ ಸಂಸದ ರಮೇಶ್ ಬಿಧೂರಿ ಉತ್ತರ ಪ್ರದೇಶ ಮತ್ತು ಬಿಹಾರದ ಜನತೆಯ ವಿರುದ್ಧ ದ್ವೇಷ ಸಾಧಿಸುತ್ತಿದ್ದಾರೆ, ಅಲ್ಲಿನ ಜನತೆಯ ಮೇಲೆ ದಾಳಿ ಮಾಡುವಂತೆ ಸೂಚನೆ ನೀಡಿದ್ದಾರೆ ಎಂಬ ಒಕ್ಕಣೆಯುಳ್ಳ ಹಿಂದಿ ಪತ್ರಿಕೆಯ ವರದಿಯೊಂದು ಸಾಮಾಜಿಕ ತಾಣದಲ್ಲಿ ವೈರಲ್ ಆಗಿತ್ತು.

ಸಂಸದರ ಹೇಳಿಕೆ ಎಂದು ಪತ್ರಿಕೆಯಲ್ಲಿ ಬಿಂಬಿಸಿದ್ದರಿಂದ ಜನರು ಕೂಡ ಅದನ್ನು ಹಂಚಿಕೊಂಡಿದ್ದರು. ಜತೆಗೆ ಸಂಸದರ ವಿರುದ್ಧ ಕಿಡಿಕಾರಿದ್ದರು.

ಆದರೆ ತನ್ನ ವಿರುದ್ಧದ ಅಪಪ್ರಚಾರ ಮತ್ತು ಸುಳ್ಳು ಸುದ್ದಿ ಹರಡುವಿಕೆ ಗಮನಕ್ಕೆ ಬಂದ ಕೂಡಲೇ ಸಂಸದ ರಮೇಶ್ ಬಿಧೂರಿ ತಾನು ಅಂತಹ ಯಾವುದೇ ಹೇಳಿಕೆ ನೀಡಿಲ್ಲ. ಅದಕ್ಕೂ ತನಗೂ ಸಂಬಂಧವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಇದರಿಂದ ವಿವಾದ ತಣ್ಣಗಾಗಿದೆ.

ಆದರೆ ಅಷ್ಟರಲ್ಲಾಗಲೇ ಆರ್‌ಜೆಡಿ ಮತ್ತು ಇತರ ಪಕ್ಷಗಳ ಮುಖಂಡರು ಸಂಸದರ ವಿರುದ್ಧ ಹೇಳಿಕೆ ನೀಡಿ ಕಿಡಿಕಾರಿದ್ದಾರೆ.

Comments are closed.