ರಾಷ್ಟ್ರೀಯ

ಅಪಹಾಸ್ಯ ಮಾಡಿದ್ದ ಕಾಂಗ್ರೆಸ್‌….ಭವಿಷ್ಯ ನುಡಿದಿದ್ದ ವಾಜಪೇಯಿ

Pinterest LinkedIn Tumblr

ಹೊಸದಿಲ್ಲಿ: ಅದು 1999ರ ಸಮಯ, ಸಂಸತ್ತಿನಲ್ಲಿ ಬಿಜೆಪಿಯ ಸಂಖ್ಯಾ ಬಲ ಕಂಡು ಕಾಂಗ್ರೆಸ್‌ ಅಪಹಾಸ್ಯ ಮಾಡಿತ್ತು. ಆದರೆ, ಈ ಮಾತಿಗೆ ಸೆಡ್ಡು ಹೊಡೆದಿದ್ದ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ, ಮುಂದೊಂದು ದಿನ ಬಿಜೆಪಿಯೇ ದೇಶದಲ್ಲಿ ಸರಕಾರ ರಚಿಸುತ್ತದೆ ಎಂದು ಹೇಳಿದ್ದರು.

ಈ ಮಾತು ಸದ್ಯ ಅಕ್ಷರಶಃ ಸತ್ಯವಾಗಿದೆ. 13 ದಿನಗಳ ಸರಕಾರ ರಚಿಸಿ, ಸಂಖ್ಯಾಬಲವಿಲ್ಲದೆ ಕೇವಲ ಒಂದು ಮತದಿಂದ ಪ್ರಧಾನಿ ಪದವಿಯಿಂದ ಇಳಿಯಬೇಕಾಗಿ ಬಂದಿತ್ತು. 1999ರ ಮೇ 27ರಂದು, ಅವಿಶ್ವಾಸ ನಿರ್ಣಯದ ಸಂದರ್ಭದಲ್ಲಿ “ತಗೊಳ್ಳಿ ನನ್ನ ರಾಜೀನಾಮೆ” ಎನ್ನುತ್ತಾ, ಅಟಲ್‌ಜೀ ಅಂದು ಮಾಡಿದ್ದ ಭಾಷಣ ಎಲ್ಲರ ಗಮನ ಸೆಳೆದಿತ್ತು.

Comments are closed.