ನವದೆಹಲಿ: ಗ್ರಾಮೀಣಭಾಗದಲ್ಲಿ ಮೂಢನಂಬಿಕೆಗಳಿಂದಾಗಿ ನಾನಾ ಆಚರಣೆಗಳನ್ನು ಮಾಡುವುದು ಸಾಮಾನ್ಯ. ಆದರೆ, ಮಧ್ಯಪ್ರದೇಶದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಲಿತಾ ಯಾದವ್ ಮಳೆದೇವರನ್ನು ಸಮಾಧಾನಪಡಿಸಲು ಕಪ್ಪೆಗಳ ಮದುವೆ ಮಾಡಿಸಿ ಟೀಕೆಗೊಳಗಾಗಿದ್ದಾರೆ.
ಚತ್ತರ್ಪುರದ ದೇವಸ್ಥಾನದಲ್ಲಿ ಎರಡು ಕಪ್ಪೆಗಳಿಗೆ ಮದುವೆ ಮಾಡಿಸಿರುವ ಸಚಿವೆ ಲಲಿತಾ ಯಾದವ್ ಇದೀಗ ಸಾರ್ವಜನಿಕರು ಮತ್ತು ವಿರೋಧಪಕ್ಷಗಳಿಂದ ಟೀಕಿಸಲ್ಪಡುತ್ತಿದ್ದಾರೆ. ದೇವಸ್ಥಾನದ ಆವರಣದಲ್ಲಿ ನೂರಾರು ಜನ ಈ ಕಪ್ಪೆಗಳ ಮದುವೆಗೆ ಸಾಕ್ಷಿಯಾದರು.
ಈ ದೇವಸ್ಥಾನದಲ್ಲಿ ಕಪ್ಪೆಗಳ ಮದುವೆ ಮತ್ತು ಹಬ್ಬದೂಟ ಮಾಡುವುದು ಬಹಳ ಹಳೆಯ ಸಂಪ್ರದಾಯ. ಇದರಿಂದಾಗಿ ಚೆನ್ನಾಗಿ ಮಳೆಯಾಗುತ್ತದೆ ಎಂಬ ನಂಬಿಕೆಯಿದೆ ಎನ್ನುತ್ತಾರೆ ದೇವಸ್ಥಾನದ ಅರ್ಚಕರು. ಆದರೆ, ಸಚಿವರ ಈ ನಡೆಯನ್ನು ವಿರೋಧಿಸಿರುವ ವಿರೋಧಪಕ್ಷದವರು ಸಚಿವರೇ ಮೂಢನಂಬಿಕೆಗಳಿಗೆ ಪ್ರಚೋದನೆ ನೀಡುವುದು ಸರಿಯಲ್ಲ ಎಂದು ಆಕ್ಷೇಪಿಸಿದ್ದಾರೆ.
ಈ ಬಗ್ಗೆ ಸಚಿವೆ ಲಲಿತಾ ಯಾದವ್ ಪ್ರತಿಕ್ರಿಯಿಸಿದ್ದು, ಇದು ಮೂಢ ಆಚರಣೆಯಲ್ಲ. ಪರಿಸರವನ್ನು ಸಮತೋಲನದಲ್ಲಿ ಇಡಲು ಈ ಕಪ್ಪೆಗಳ ಮದುವೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
Comments are closed.