ರಾಷ್ಟ್ರೀಯ

ರವಿ ಪೂಜಾರಿಯಿಂದ ಗುಜರಾತ್​ ಶಾಸಕ ಜಿಗ್ನೇಶ್ ಮೇವಾನಿ ನಂತರ ಉಮರ್​ ಖಾಲಿದ್​ಗೆ ಜೀವ ಬೆದರಿಕೆ..!

Pinterest LinkedIn Tumblr


ನವದೆಹಲಿ: ಗುಜರಾತ್​ ಶಾಸಕ ಜಿಗ್ನೇಶ್ ಮೇವಾನಿ ಬೆನ್ನಲ್ಲೇ ಜೆಎನ್ಯೂ ವಿಶ್ವಾವಿದ್ಯಾಲಯ ವಿದ್ಯಾರ್ಥಿ ನಾಯಕ ಉಮರ್​ ಖಾಲಿದ್​ಗೆ ಜೀವ ಬೆದರಿಕೆ ಎನ್ನಲಾಗಿದೆ. ಈ ಸಂಬಂಧ ಉಮರ್​ ದೆಹಲಿ ವಸಂತ್​ ಕುಂಜ್​ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದು, ಭದ್ರತೆ ನೀಡುವಂತೆ ಮನವಿ ಮಾಡಿದ್ದಾರೆ.

ಈ ಕುರಿತು ನ್ಯೂಸ್​-18 ಗೆ ಪ್ರತಿಕ್ರಿಯಿಸಿದ ಉಮರ್​, ಭೂಗತ ಪಾತಕಿ ರವಿ ಪೂಜಾರಿ ಎಂಬಾತನಿಂದ ಜೀವ ಬೆದರಿಕೆ ಬಂದಿದೆ. ಸಾರ್ವಜನಿಕ ಸ್ಥಳದಲ್ಲಿ, ಕಾರ್ಯಕ್ರಮಗಳಲ್ಲಿ ಪ್ರಚೋದನಕಾರಿ ಭಾಷಣಗಳನ್ನು ಮಾಡದಂತೆ ಬೆದರಿಕೆ ಹಾಕಲಾಗಿದೆ. ಜಿಗ್ನೇಶ್​ ಮೊಬೈಲ್​ಗೆ ಸಂದೇಶ ಬಂದಿದ್ದು, ನನ್ನನ್ನು ಕೊಲ್ಲುವುದಾಗಿ ಹೇಳಿದ್ದಾರೆ ಎಂದು ತಿಳಿಸಿದರು. ​

ಇನ್ನು 2016 ರಲ್ಲಿ ಉಮರ್​ ತಂದೆ ಅವರಿಗೆ ಕರೆ ಮಾಡಿ ಉಮರ್​ ಅವರನ್ನು ದೇಶ ಬಿಡುವಂತೆ ಕೇಳಿದ್ದಾರೆ ಎನ್ನಲಾಗಿತ್ತು ಒಂದು ವೇಳೆ ದೇಶ ತೊರೆಯದಿದ್ದರೆ, ಉಮರ್​ ಖಾಲಿದ್​ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸ್​ ಇಲಾಖೆಗೆ ಉಮರ್​ ತಂದೆ ದೂರು ನೀಡಿದ್ದರು.

ಈ ಹಿಂದೆ ಅಫ್ಜಲ್​ ಗುರು ಗಲ್ಲು ಶಿಕ್ಷೆಯನ್ನು ಕಾರ್ಯಗಾರ ಮಾಡಿದ್ದರು ಮತ್ತು ದೇಶ ವಿರೋಧಿ ಘೋಷಣೆಗನ್ನು ಕೂಗಿದ್ದರು ಎನ್ನುವ ಆರೋಪದ ಅಡಿಯಲ್ಲಿ ಮಾಜಿ ಜೆಎನ್ಯೂ ವಿದ್ಯಾರ್ಥಿ ಸಂಘದ ನಾಯಕ ಕನ್ನಯ್ಯ, ಅನಿರ್ಬನ್ ಭಟ್ಟಾಚಾರ್ಯ ಮತ್ತು ಉಮರ್​ ವಿರುದ್ಧ ದೇಶದ್ರೋಹಿ ಪ್ರಕರಣ ದಾಖಲಿಸಿದ್ದರು ಎನ್ನಲಾಗಿದೆ.

Comments are closed.