ರಾಷ್ಟ್ರೀಯ

ಬಾಲಕಿಯೊಂದಿಗೆ ಪತಿಯ ಅನೈತಿಕ ಸಂಬಂಧವಿಲ್ಲವೆಂದು ಸಾಬೀತಿಗೆ ಕುದಿಯುವ ಎಣ್ಣೆಯಲ್ಲಿ ಕೈ !

Pinterest LinkedIn Tumblr


ರಾಜ್‌ಕೋಟ್: ಪ್ರೇಮ ಸಂಬಂಧವಿಲ್ಲವೆಂದು ಸಾಬೀತು ಪಡಿಸಲು ಅಪ್ರಾಪ್ತ ಬಾಲಕಿಯ ಕೈಯ್ಯನ್ನು ಕುದಿಯುತ್ತಿರುವ ಎಣ್ಣೆಯಲ್ಲಿ ಬಲವಂತವಾಗಿ ಮುಳುಗಿಸಿದ ಕ್ರೂರ ಕೃತ್ಯ ಇಲ್ಲಿನ ಭಗವತಿಪುರದಲ್ಲಿ ನಡೆದಿದೆ.

ಅಮಾನವೀಯವಾಗಿ ವರ್ತಿಸಿದ ದಂಪತಿ ಈಗ ಪೊಲೀಸರ ವಶದಲ್ಲಿದ್ದು, ಸುಟ್ಟಗಾಯಗಳಿಂದ ಬಳಲುತ್ತಿರುವ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ದೊರೆತಿರುವ ವಿವರಗಳ ಪ್ರಕಾರ, ರಾಹುಲ್ ಪರ್ಮಾರ್ ಮತ್ತು ಆತನ ಪತ್ನಿ ಸುಮನ್ ಬಾಲಕಿಯ ಮೇಲೆ ದೌರ್ಜನ್ಯ ಎಸಗಿದ ಆರೋಪಿಗಳಾಗಿದ್ದಾರೆ. ಪತಿ ರಾಹುಲ್‌ಗೆ ಸಂತ್ರಸ್ತ ಬಾಲಕಿಯ ಜತೆ ಅನೈತಿಕ ಸಂಬಂಧ ಇದೆ ಎಂದು ಸುಮನ್‌ಗೆ ಅನುಮಾನವಿತ್ತು. ಆದರೆ ಬಾಲಕಿ, ರಾಹುಲ್ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದಾನೆ ಎಂದು ದೂರಿದ್ದಳು.

ಮಂಗಳವಾರ ದಿನ ಸುಮನ್ ನಿಮ್ಮಿಬ್ಬರಲ್ಲಿ ಅನೈತಿಕ ಸಂಬಂಧ ಇಲ್ಲವೆಂದು ಸಾಬೀತು ಪಡಿಸಲು ಕುದಿಯುವ ಎಣ್ಣೆಯಲ್ಲಿ ಕೈ ಹಾಕಿ ಎಂದಿದ್ದಾಳೆ. ಒಪ್ಪದಿದ್ದಾಗಿ ಒತ್ತಾಯಪೂರ್ವಕವಾಗಿ ಅವರಿಬ್ಬರಿಂದ ಎಣ್ಣೆಯಲ್ಲಿ ಕೈ ಹಾಕಿಸಿದ್ದಾಳೆ. ರಾಹುಲ್ ಕೈ ಅಲ್ಪಸ್ವಲ್ಪ ಸುಟ್ಟು ಹೋದರೆ, ಬಾಲಕಿಯ ಕೈ ಸಂಪೂರ್ಣವಾಗಿ ಬೆಂದು ಹೋಗಿದೆ.

ಈ ಕ್ರೂರ ಕೃತ್ಯದ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಬಾಲಕಿ ಪೋಷಕರು ಮಗಳಿಗಾದ ಅನ್ಯಾಯಕ್ಕೆ ನ್ಯಾಯ ದೊರಕಿಸಿ ಕೊಡುವಂತೆ ಮನವಿ ಮಾಡಿದ್ದಾರೆ.

Comments are closed.