ಜಾಜ್ಪುರ, ಒಡಿಶಾ : ಒಡಿಶಾದ ಜಾಜ್ಪುರ ಜಿಲ್ಲೆಯ ವನಮಾಲಿ ಗ್ರಾಮದ ವಿವಾಹಿತೆಯೊಬ್ಬಳನ್ನು ರೇಪ್ ಮಾಡಲು ಯತ್ನಿಸಿದ ಗ್ರಾಮದ ಸರಪಂಚನನ್ನು ಪೊಲೀಸರು ಬಂಧಿಸಿದ್ದಾರೆ.
30ರ ಹರೆಯದ ಸಂತ್ರಸ್ತ ಮಹಿಳೆಯು ಪೊಲೀಸರಲ್ಲಿ ಎಫ್ಐಆರ್ ದಾಖಲಿಸಿರುವ ಪ್ರಕಾರ ಪೊಲೀಸರು ಮಾಜಿಪಾಡ ಗ್ರಾಮ ಪಂಚಾಯತ್ನ ಸರಪಂಚ ತಪಸ್ ಚಂದ್ರ ರಾಯ್ ನನ್ನು ಕಟಕ್ನಲ್ಲಿ ನಿನ್ನೆ ಶೋಧ ಕಾರ್ಯಾಚರಣೆ ನಡೆಸಿ ಬಂಧಿಸಿದರು.
ಇಬ್ಬರು ಮಕ್ಕಳ ತಂದೆಯಾಗಿರುವ ಸರಪಂಚ ತಪಸ್ ಚಂದ್ರ ರಾಯ್, ಕಳೆದ ಮಾರ್ಚ್ 31ರ ರಾತ್ರಿ ಸಂತ್ರಸ್ತ ಮಹಿಳೆಯು ತನ್ನ ಮನೆಯಲ್ಲಿ ಒಂಟಿಯಾಗಿದ್ದಾಗ ಆಕೆಯ ಮನೆಯನ್ನು ಪ್ರವೇಶಿಸಿ, ಬಾಗಿಲು ಮುಚ್ಚಿ ಅಗುಳಿ ಹಾಕಿ ಆಕೆಯ ಮೇಲೆ ರೇಪ್ ಮಾಡಲು ಮುಂದಾಗಿದ್ದ ಎಂದು ಪೊಲೀಸರು ಎಫ್ಐಆರ್ ಮಾಹಿತಿಯನ್ನು ಆಧರಿಸಿ ತಿಳಿಸಿದ್ದಾರೆ.
-ಉದಯವಾಣಿ
Comments are closed.