ರಾಷ್ಟ್ರೀಯ

ಬಹುಪತ್ನಿತ್ವ, ನಿಖಾ ಒಪ್ಪಂದಕ್ಕೆ ಸಾಂವಿಧಾನಿಕ ಮಾನ್ಯತೆ: ಕೇಂದ್ರದ ಪ್ರತಿಕ್ರಿಯೆ ಕೇಳಿದ ಸುಪ್ರೀಂ

Pinterest LinkedIn Tumblr


ಹೊಸದಿಲ್ಲಿ: ಮುಸ್ಲಿಮ್‌ ಸಮುದಾಯದಲ್ಲಿನ ಬಹುಪತ್ನಿತ್ವ ಹಾಗೂ ನಿಖಾ ಹಲಾಲ್‌ ಒಪ್ಪಂದಕ್ಕೆ ಸಾಂವಿಧಾನಿಕ ಮಾನ್ಯತೆ ಪರಾಮರ್ಶೆಗಾಗಿ ಸುಪ್ರೀಂಕೋರ್ಟ್‌ ಒಪ್ಪಿಗೆ ಸೂಚಿಸಿದ್ದು, ಕಾನೂನು ಆಯೋಗ ಮತ್ತು ಕೇಂದ್ರ ಸರಕಾರ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದೆ.

ತ್ರಿವಳಿ ತಲಾಖ್‌ ನಿಷೇಧ ನಂತರ ಈ ವಿಷಯವನ್ನು ಐವರು ನ್ಯಾಯಮೂರ್ತಿಗಳನ್ನೊಳಗೊಂಡ ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಲಾಗಿದೆ.

ಈ ವಿಷಯದ ಕುರಿತು ಸಾಂವಿಧಾನಿಕ ಮಾನ್ಯತೆ ಪರಾಮರ್ಶೆಗಾಗಿ ಪೀಠ ರಚಿಸಲಾಗಿದೆ ಎಂದು ನ್ಯಾಯಮೂರ್ತಿ ಎ.ಎಂ. ಖಾನ್ವಿಲ್‌ಕರ್‌, ಡಿ. ಚಂದ್ರಚೂಡ್‌ ನೇತೃತ್ವದ ಪೀಠ ತಿಳಿಸಿದೆ.

ತಲಾಖ್‌ ನೀಡಿದ ಬಳಿಕ ಮೊದಲ ಪತ್ನಿಯನ್ನು ಮತ್ತೆ ಮದುವೆಯಾಗಲು ಅವಕಾಶವಿದೆ. ಎರಡನೇ ಪತ್ನಿ ಮೃತಪಟ್ಟಾಗ ಅಥವಾ ಎರಡನೇ ಮದುವೆ ಮುರಿದುಬಿದ್ದಾಗ ಮೊದಲ ಪತ್ನಿ ಜತೆ ಪುನರ್‌ ವಿವಾಹವಾಗುವುದಕ್ಕೆ ನಿಖಾ ಹಲಾಲ್‌ ಎನ್ನಲಾಗುತ್ತದೆ.

ಮುಸ್ಲಿಮ್‌ ಸಮುದಾಯದಲ್ಲಿನ ತ್ರಿವಳಿ ತಲಾಖ್‌ ಅಸಾಂವಿಧಾನಿಕ ಎಂದು ಸುಪ್ರೀಂ ಕೋರ್ಟ್‌ ಕಳೆದ ವರ್ಷ ತೀರ್ಪು ನೀಡಿದೆ.

Comments are closed.