ತ್ರಿಶ್ಶೂರು: ತಮಿಳುನಾಡಿನ ಥೇಣಿ ಬಳಿ ಭಾರಿ ಕಾಡ್ಗಿಚ್ಚು ಪರಿಣಾಮದಿಂದ 10ಕ್ಕೂ ಹೆಚ್ಚು ಮಂದಿ ಮೃತಪಟ್ಟ ಘಟನೆ ಬೆನ್ನಲ್ಲೇ ಕೇರಳದಲ್ಲಿ ಮತ್ತೊಂದು ಭಾರಿ ಕಾಡ್ಗಿಚ್ಚು ಕಾಣಿಸಿಕೊಂಡಿದೆ.
ತ್ರಿಶ್ಶೂರು ಸಮೀಪದ ವದಮುರಿ ಸಮೀಪದ ಪಿಲ್ಲಪ್ಪಾರ ಸಮೀಪ ಎರಡು ಕಡೆ ಕಾಡ್ಗಿಚ್ಚು ಕಾಣಿಸಿಕೊಂಡಿದೆ.
ಸುಮಾರು 30 ಎಕರೆ ಅರಣ್ಯ ಪ್ರದೇಶಕ್ಕೆ ಬೆಂಕಿಯ ಕೆನ್ನಾಲಗೆ ಚಾಚಿಕೊಂಡಿದೆ.
60ಕ್ಕೂ ಹೆಚ್ಚು ಅಗ್ನಿ ಶಾಮಕ ಸಿಬ್ಬಂದಿ ಹಾಗೂ ಅರಣ್ಯ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ಈ ಕಾಡ್ಗಿಚ್ಚಿನಲ್ಲಿ ಯಾರದಾದರೂ ಕೈವಾಡ ಇದೆಯೇ ಇಲ್ಲವೇ ಎಂಬ ಅರಣ್ಯಾಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.
ಪೊಲೀಸ್ ಅಧಿಕಾರಿಗಳು ಕೂಡ ಪ್ರತ್ಯೇಕವಾಗಿ ತನಿಖೆ ಆರಂಭಿಸಿದ್ದಾರೆ.
Comments are closed.