ರಾಷ್ಟ್ರೀಯ

ಮುಸ್ಲಿಂ ಮಹಿಳೆಯ ಬೆರಳು, ಮಗನ ಕೈ ಕತ್ತರಿಸಿದ ಬಜರಂಗಿಗಳು

Pinterest LinkedIn Tumblr


ಅಹಮದಾಬಾದ್‌: ಗಾಂಧಿನಗರದ ಛತ್ರಾಲ್‌ನಲ್ಲಿ ಇತ್ತೀಚೆಗೆ ಬಜರಂಗದಳದ ಕಾರ್ಯಕರ್ತರು ಮುಸ್ಲಿಂ ಮಹಿಳೆಯೊಬ್ಬರ ಬೆರಳುಗಳನ್ನು ಕತ್ತರಿಸಿ ಆಕೆಯ ಮಗನ ಕೈಗಳನ್ನು ಮುರಿದ್ದಾರೆ.

ಹಿಂದೂ ಸಂಘಟನೆಗಳ ಆದೇಶವನ್ನು ಉಲ್ಲಂಘಿಸಿರುವುದಕ್ಕೆ ಬಜರಂಗದಳದವರು ರೋಶನ್‌ ಬೀವಿ ಅವರ ಎಡ್ಐನ ಹೆಬ್ಬೆರಳು, ತೋರು ಬೆರಳು, ಮಧ್ಯದ ಬೆರಳನ್ನು ಕತ್ತರಿಸಿದ್ದಾರೆ. ಅವರ ಮಗ ಫರ್ಜಾನ್‌ ಎಂಬವನ ಕೈಗಳನ್ನು ಮುರಿದಿದ್ದಾರೆ. ಇಬ್ಬರೂ ಈಗ ಆಸ್ಪತ್ರೆಯಲ್ಲಿದ್ದಾರೆ.

ಈ ಪ್ರದೇಶದಲ್ಲಿ ಡಿಸೆಂಬರ್‌ ಆರರ ಬಳಿಕ ಉದ್ವಿಗ್ನ ವಾತಾವರಣವಿದೆ. 1992ರಲ್ಲಿ ಬಾಬರಿ ಮಸೀದಿ ಕೆಡವಿದ ಹಿನ್ನೆಲೆಯಲ್ಲಿ ಹಿಂದೂ ಸಂಘಟನೆಗಳವರು ಆ ಪ್ರದೇಶದಲ್ಲಿ ಮೆರವಣಿಗೆ ಆಯೋಜಿಸಿದ್ದರು. ಮೆರವಣಿಗೆಯ ದಿನ ಮನೆಯಿಂದ ಹೊರ ಬರದಂತೆ ಈ ಸಂತ್ರಸ್ತ ತಾಯಿ ಮತ್ತು ಮಗನಿಗೆ ಬಜರಂಗದಳದವರು ಸೂಚಿಸಿದ್ದರು. ಆದರೆ ಅವರು ತಮ್ಮ ಜಾನುವಾರು ಮೇಯಿಸಲು ಹೊರಗೆ ಬಂದಿದ್ದರು.ಹಾಲು ಮಾರುವ ವ್ಯಕ್ತಿಯೊಬ್ಬರು ಬಜರಂಗದಳದವರ ಈ ದೌರ್ಜನ್ಯ ನೋಡಿ ತಾಯಿ, ಮಗನನ್ನು ರಕ್ಷಿಸಿದ್ದಾರೆ ಎಂದು ಸಂಬಂಧಿ ಅಸ್ಲಂ ಸೈಯ್ಯದ್‌ ಹೇಳಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.

Comments are closed.