ರಾಷ್ಟ್ರೀಯ

ಬಿಜೆಪಿ ಸೇರಿದ ನರೇಶ್‌, ಫಿಲ್ಮೀವಾಲಿ ಜಯಾ ಬಚ್ಚನ್‌ ವಿರುದ್ಧ ಕಿಡಿ

Pinterest LinkedIn Tumblr


ಹೊಸದಿಲ್ಲಿ : ಇದೇ ಮಾರ್ಚ್‌ 23ರಂದು ನಡೆಯುವ ರಾಜ್ಯಸಭಾ ಚುನಾವಣೆಗೆ ಸಮಾಜವಾದಿ ಪಕ್ಷ, ರಾಜಕಾರಣಿಯಾಗಿ ಪರಿವರ್ತಿತರಾಗಿರುವ ನಟಿ ಜಯಾ ಬಚ್ಚನ್‌ ಅವರಿಗೆ, ಟಿಕೆಟ್‌ ಕೊಟ್ಟಿರುವುದನ್ನು ಈಗಷ್ಟೇ ಬಿಜೆಪಿ ಸೇರಿರುವ ಮಾಜಿ ಎಸ್‌ಪಿ ನಾಯಕ ನರೇಶ್‌ ಅಗ್ರವಾಲ್‌ ತೀವ್ರವಾಗಿ ಟೀಕಿಸಿದ್ದಾರೆ.

“ನನ್ನನ್ನು ಚಿತ್ರ ನಟಿ ಜಯಾ ಬಚ್ಚನ್‌ ಅವರಿಗೆ ಸರಿ ಸಮಾನ ಸ್ಥಾನದಲ್ಲಿ ಇರಿಸಲಾಗಿತ್ತು. ಆದರೆ ನನ್ನ ಟಿಕೆಟನ್ನು ಆಕೆಗೆ ಕೊಡಲಾಗಿದೆ. ನಾನು ಯಾವುದೇ ಶರತ್ತಿನ ಮೇಲೆ ಬಿಜೆಪಿಗೆ ಬಂದಿಲ್ಲ. ನನಗೆ ರಾಜ್ಯಸಭೆಯ ಟಿಕೆಟ್‌ ಬೇಕಾಗಿಲ್ಲ’ ಎಂದು ಅಗ್ರವಾಲ್‌ ಪ್ರತಿಕ್ರಿಯಿಸಿದರು.

ಇದಕ್ಕೆ ಮುನ್ನ ನರೇಶ್‌ ಅಗ್ರವಾಲ್‌ ಅವರು ಕೇಂದ್ರ ಸಚಿವ ಪಿಯೂಶ್‌ ಗೋಯಲ್‌ ಅವರ ಸಮ್ಮುಖದಲ್ಲಿ ಬಿಜೆಪಿ ಸೇರುವ ಮೂಲಕ, ಸಮಾಜವಾದಿ ಪಕ್ಷಕ್ಕೆ ಭಾರೀ ಹೊಡೆತ ನೀಡಿದ್ದರು.

ಅಗ್ರವಾಲ್‌ ಅವರು ಸಮಾಜವಾದಿ ಪಕ್ಷದ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯಸಭೆಯ ಸದಸ್ಯರಾಗಿದ್ದರು. ಆದರೆ ಜಯಾ ಬಚ್ಚನ್‌ ಅವರಿಗೆ ರಾಜ್ಯಸಭೆಯ ಟಿಕೆಟ್‌ ನೀಡಿದ ಮಾಜಿ ಸಿಎಂ ಮತ್ತು ಪಕ್ಷಾಧ್ಯಕ್ಷರಾಗಿರುವ ಅಖೀಲೇಶ್‌ ಯಾದವ್‌ ಬಗ್ಗೆ ಅಗ್ರವಾಲ್‌ಗೆ ತೀವ್ರ ಅಸಮಾಧಾನ ಉಂಟಾಗಿತ್ತು.

-ಉದಯವಾಣಿ

Comments are closed.