ಲಕ್ನೋ: ಹೋಳಿ ಮೆರವಣಿಗೆಗಾಗಿ ಉತ್ತರಪ್ರದೇಶದಲ್ಲಿ ನಮಾಜ್ ಸಮಯ ಬದಲಾವಣೆ ಮಾಡಿರುವ ಕುರಿತು ಭಾರಿ ಚರ್ಚೆ ನಡೆಯುತ್ತಿರುವ ವೇಳೆಯಲ್ಲಿ ನಾನೊಬ್ಬ ಧರ್ಮ ನಿಷ್ಠ ಹಿಂದುವಾಗಿದ್ದು ಈದ್ ಹಬ್ಬವನ್ನು ಆಚರಣೆ ಮಾಡಿಕೊಳ್ಳುವುದಿಲ್ಲ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿಧಾನಸಭೆಯಲ್ಲಿ ಹೇಳಿಕೆ ನೀಡಿದ್ದಾರೆ.
ಕಾಂಗ್ರೆಸ್ ಮತ್ತು ಎಸ್ಪಿಯನ್ನು ಗುರಿಯಾರಿಸಿಕೊಂಡು ವಾಗ್ದಾಳಿ ನಡೆಸಿದ ಯೋಗಿ ‘ನನ್ನ ಧರ್ಮದ ಮೇಲೆ ನಂಬಿಕೆ ಇರುವಾಗ ನಾನ್ಯಾಕೆ ಈದ್ ಆಚರಿಸಬೇಕು. ನಾನು ಜನಿವಾರ ಧಾರಿಯೂ ಅಲ್ಲ, ಟೋಪಿ ಧರಿಸುವವನೂ ಅಲ್ಲ’ ಎಂದಿದ್ದಾರೆ.
ತ್ರಿಪುರಾದಲ್ಲಿ ಬಿಜೆಪಿ ಗೆಲುವನ್ನು ಉಲ್ಲೇಖ ಮಾಡಿ ಎಸ್ಪಿ ಗೆ ತಿರುಗೇಟು ನೀಡಿದ ಯೋಗಿ ‘ಕೆಂಪು ಧ್ವಜಗಳನ್ನು ಕೆಳಗಿಳಿಸಲಾಗಿದೆ. ಕೆಂಪು ಟೋಪಿಗಳನ್ನೂ ಕೆಳಗಿಳಿಸಲಾಗಿದೆ’ ಎಂದರು.
-ಉದಯವಾಣಿ
Comments are closed.