ರಾಷ್ಟ್ರೀಯ

ಎಡಪಕ್ಷಗಳ ಅವಸಾನ, ದೇಶದ ದುರಂತ: ಜೈರಾಮ್ ರಮೇಶ್

Pinterest LinkedIn Tumblr


ತಿರುವನಂತಪುರಂ: ಎಡಪಕ್ಷಗಳ ಅವಸಾನವಾದರೆ ಭಾರತದ ಪಾಲಿಗೆ ಅದು ಅತೀ ದೊಡ್ಡ ದುರಂತ ಎಂದು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಹೇಳಿದ್ದಾರೆ.

ಕೇರಳದ ತಿರುವನಂತಪುರಂನಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ದ ಅವರು, ತ್ರಿಪುರ ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಕಂಡ ಎಡಪಕ್ಷಗಳ ಕುರಿತು ಆತಂಕ ವ್ಯಕ್ತಪಡಿಸಿದರು. ಭಾರತದಲ್ಲಿ ಎಡಪಕ್ಷ ಮತ್ತಷ್ಟು ಸ್ಥಿರತೆ ಕಾಣಬೇಕಿದೆ. ನಾವು ರಾಜಕೀಯ ವಿರೋಧಿಯಿರಬಹುದು. ಆದರೆ ನನ್ನ ಸ್ವಂತ ಅಭಿಪ್ರಾಯದಲ್ಲಿ ಭಾರತದಲ್ಲಿ ಎಡಪಕ್ಷಗಳ ಅವಸಾನ ಸಹಿಸಿಕೊಳ್ಳುವುದು ಕಷ್ಟ. ಅದು ಭಾರತಕ್ಕೆ ದುರಂತವಾಗಿ ಪರಿಣಮಿಸಬಹುದು ಎಂದು ಅಭಿಪ್ರಾಯಪಟ್ಟರು.

ತ್ರಿಪುರ ವಿಧಾನಸಭಾ ಚುನಾವಣೆಯ ಫಲಿತಾಂಶ ಕಳೆದ ಮಾ.3 ರಂದು ಹೊರಬಿದ್ದಿದ್ದು, ಬಿಜೆಪಿ ಮತ್ತು ಮಿತ್ರಪಕ್ಷಗಳು ಪ್ರಥಮ ಬಾರಿಗೆ ಆಧಿಪತ್ಯ ಸ್ಥಾಪಿಸಿವೆ.

Comments are closed.