ರಾಷ್ಟ್ರೀಯ

ಭಾರತೀಯ ಮುಸ್ಲಿಮರೆಲ್ಲಾ ರಾಮನ ವಾರಸುದಾರರು: ಗಿರಿರಾಜ್ ಸಿಂಗ್

Pinterest LinkedIn Tumblr


ಹೊಸದಿಲ್ಲಿ: ಭಾರತೀಯ ಮುಸ್ಲಿಮರೆಲ್ಲರೂ ರಾಮನ ವಾರಸುದಾರರು ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಬಾಬರಿ ಮಸೀದಿ ನಿರ್ಮಿಸಿಯೇ ತೀರುತ್ತೇವೆ ಎಂಬ ಎಂಐಎ ಮುಖಂಡ, ಹೈದರಾಬಾದಿನ ಸಂಸದ ಅಸಾದುದ್ದೀನ್ ಓವೈಸಿ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ ಗಿರಿರಾಜ್ ಈ ರೀತಿ ಹೇಳಿದ್ದಾರೆ.

ಅಸಾದುದ್ದೀನ್ ಓವೈಸಿಗೆ ಜಿನ್ನಾ ಭೂತ ಹಿಡಿದಿದೆ ಎಂದೂ, ದೇಶವನ್ನು ಛಿದ್ರ ಮಾಡಬೇಕು ಎಂಬ ಧೋರಣೆಯಿಂದ ಆ ರೀತಿ ಮಾತನಾಡುತ್ತಿದ್ದಾರೆಂದು ಅವರು ಹೇಳಿದ್ದಾರೆ. ‘ಅವರೆಲ್ಲಾ ಮೆಕ್ಕಾ ಯಾತ್ರೆಗೆ ಹೋಗುತ್ತಾರೆ. ಹಾಗಿದ್ದರೆ ನಾವು ಎಲ್ಲಿಗೆ ಹೋಗಬೇಕು. ನಮಗಾಗಿ ಪಾಕಿಸ್ತಾನದಲ್ಲಿ ರಾಮಮಂದಿರ ನಿರ್ಮಿಸುತ್ತೀರಾ’ ಎಂದು ಪ್ರಶ್ನಿಸಿದ್ದಾರೆ.

ಭಾರತದಲ್ಲಿ ಬಾಬರ್ ವಾರಸುದಾರರು ಯಾರೂ ಇಲ್ಲವೆಂದು, ಭಾರತೀಯ ಮುಸ್ಲಿಮರೆಲ್ಲರೂ ರಾಮನ ವಾರಸುದಾರರು. ಹಿಂದೂ, ಮುಸ್ಲಿಮ್ ಪೂಜೆಯಲ್ಲಿ ವ್ಯತ್ಯಾಸ ಇದ್ದರೂ, ತಾವೆಲ್ಲಾ ಒಂದೇ ಎಂದೂ, ಭಾರತೀಯರೆಲ್ಲರು ಪೂಜಿಸುವುದು ರಾಮನನ್ನೇ ಎಂದು ಅವರು ಹೇಳಿದ್ದಾರೆ.

ಅಯೋಧ್ಯೆಯಲ್ಲಿ ಮತ್ತೆ ಬಾಬರಿ ಮಸೀದು ನಿರ್ಮಿಸುವುದಾಗಿ, ಸುಪ್ರೀಂ ಕೋರ್ಟ್ ತೀರ್ಪು ತಮಗೆ ಅನುಕೂಲಕರವಾಗಿ ಬರುತ್ತೆಂದು ಒವೈಸಿ ಶನಿವಾರ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಗಿರಿರಾಜ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ.

Comments are closed.