ರಾಷ್ಟ್ರೀಯ

ಪಾಲಕರ ಮೇಲಿನ ದ್ವೇಷಕ್ಕೆ ಬಾಲಕನನ್ನು ಕೊಂದು ಕಬೋರ್ಡ್​​ನಲ್ಲಿಟ್ಟಿದ್ದ…

Pinterest LinkedIn Tumblr

4
ನವದೆಹಲಿ: ಪಾಲಕರ ಮೇಲಿದ್ದ ಕೋಪವನ್ನು ಅವರ ಮಗನನ್ನು ಕೊಲೆ ಮಾಡುವ ಮೂಲಕ ತೀರಿಸಿಕೊಂಡಿರುವ 27 ವರ್ಷದ ಆರೋಪಿಯನ್ನು ಪೊಲೀಸರು ಸೋಮವಾರ ರಾತ್ರಿ ಬಂಧಿಸಿದ್ದಾರೆ.

7 ವರ್ಷದ ಬಾಲಕ ಆಶಿಶ್‌ನನ್ನು ಆತನ ದೂರದ ಸಂಬಂಧಿ, ಆರೋಪಿ ಅವಧೀಶ್‌ ಕೊಲೆ ಮಾಡಿದ್ದಾನೆ. ಪಶ್ಚಿಮ ದೆಹಲಿಯ ಸ್ವರೂಪ್‌ನಗರದಲ್ಲಿ ವಾಸವಾಗಿದ್ದ ಆಶಿಶ್‌ ನಿವಾಸದ ಬಳಿಯೇ ಆರೋಪಿ ಕೂಡ ವಾಸಿಸುತ್ತಿದ್ದ.

ಆಶಿಶ್‌ ಪಾಲಕರು ಇಲ್ಲದ ವೇಳೆ ಆತನನ್ನು ಕೊಲೆ ಮಾಡಿ ನಂತರ ದೇಹವನ್ನು ಕಬೋರ್ಡ್‌ನಲ್ಲಿಟ್ಟಿದ್ದ. ಬೀದಿಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಗೆ ಹೆದರಿದ ಆತ ದೇಹವನ್ನು ಹೊರಸಾಗಿಸುವ ಯತ್ನ ಮಾಡದೆ ಕೊಠಡಿಯೊಂದರಲ್ಲಿ ಬಚ್ಚಿಟ್ಟಿದ್ದಾನೆ.

ಮೂರು ದಿನಗಳ ಬಳಿಕ ಮಗ ಕಾಣೆಯಾಗಿರುವ ಕುರಿತು ಮತ್ತು ರೂಮಿನಿಂದ ಬರುತ್ತಿದ್ದ ವಾಸನೆ ಬಗ್ಗೆ ಅವಧೀಶ್‌ನನ್ನು ವಿಚಾರಿಸಿದಾಗ ರೂಮಿನಿಂದ ಇಲಿ ಸತ್ತಿರುವ ವಾಸನೆ ಬರುತ್ತಿದೆ ಎಂದು ಹೇಳಿ, ಒಂದು ಇಲಿಯನ್ನು ತಂದು ತೋರಿಸಿ ನಂಬಿಸಿದ್ದಾನೆ. ನಂತರ ಅವಧೀಶ್‌ ಮನೆಗೆ ಬರುವುದನ್ನೇ ನಿಲ್ಲಿಸಿದ್ದ. ಇದರಿಂದ ಅನುಮಾನಗೊಂಡ ಪಾಲಕರು ಪೊಲೀಸರಿಗೆ ದೂರು ನೀಡಿದ್ದಾರೆ.

ಆಶಿಶ್ ಹೆತ್ತವರು ತನ್ನನ್ನು ನಿಂದಿಸುತ್ತಿದ್ದರು. ಅಲ್ಲದೆ, ತಾನು ಅವರ ಮನೆಗೆ ಹೋಗುವುದನ್ನು ಅವರು ಇಷ್ಟಪಡುತ್ತಿರಲಿಲ್ಲ ಎಂದು ಆರೋಪಿ ಅವದೀಶ್ ಪೊಲೀಸರ ವಿಚಾರಣೆ ವೇಳೆ ತಿಳಿಸಿರುವುದಾಗಿ ಪೊಲೀಸ್ ಉಪ ಆಯುಕ್ತ ಅಸ್ಲಾಮ್ ಖಾನ್ ತಿಳಿಸಿದ್ದಾರೆ.

Comments are closed.