ರಾಷ್ಟ್ರೀಯ

ಭಗವಾನ್‌ ಕೃಷ್ಣನನ್ನು ಪರೀಕ್ಷಿಸಲು ಹೋಗಿ ಕಾಲು ಮುರಿದುಕೊಂಡ!

Pinterest LinkedIn Tumblr


ಮಥುರಾ: ಉತ್ತರ ಪ್ರದೇಶದ ಮಥುರಾದಲ್ಲೊಬ್ಬ ಅಂಧ ಭಕ್ತನೊಬ್ಬ ದೇವರನ್ನೇ ಪರೀಕ್ಷಿಸಲು ಹೋಗಿ ಕೈಕಾಲು ಕಳೆದುಕೊಂಡ ಘಟನೆ ನಡೆದಿದೆ.

ಹಜರತ್ ಗಂಜ್‌ನ ನಿವಾಸಿ ವಿಕಾಸ್‌ ಭಗವಾನ್‌ ಕೃಷ್ಣನ ಪರಮ ಭಕ್ತ. ದೇವರು ತನ್ನ ಜೊತೆ ಇದ್ದಾನೆಯೇ ಎಂದು ಪರೀಕ್ಷಿಸಲು ಹೋಗಿದ್ದಾನೆ. ಅಲ್ಲದೇ ಸಾವಿನ ದವಡೆಯಿಂದ ದೇವರು ಎಲ್ಲರನ್ನೂ ಪಾರು ಮಾಡುತ್ತಾನೆ ಎಂದೂ ನಿರೂಪಿಸಲು ಪ್ರಯತ್ನಪಟ್ಟಿದ್ದು ಆತನ ಕಾಲುಗಳಿಗೆ ಮಾರಕವಾಗಿದೆ.

ಮಥುರಾದ ಪ್ರೇಮ್‌ ಮಂದಿರದ ಚಾವಣಿ ಏರಿದ ವಿಕಾಸ್‌ ಅಲ್ಲಿಂದ ಜಿಗಿದಿದ್ದಾನೆ. ಇದನ್ನು ಗಮನಿಸಿದ ಸಾರ್ವಜನಿಕರು ಆತನನ್ನು ರಕ್ಷಿಸಿದ್ದಾರೆ. ಗಾಯಗೊಂಡ ವಿಕಾಸ್‌ನನ್ನು ಸಾರ್ವಜನಿಕರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈತನ ಎರಡೂ ಕಾಲುಗಳು ಮುರಿದಿವೆ ಎಂದು ವೈದ್ಯರು ಹೇಳಿದ್ದಾರ.

ಬಾಲ್ಯದಿಂದಲೂ ಕೃಷ್ಣನನ್ನು ಪೂಜಿಸುತ್ತಿದ್ದ ವಿಕಾಸ್‌, ಭಗವಾನ್‌ ಕೃಷ್ಣ ಎಲ್ಲರನ್ನೂ ಸಾವಿನಿಂದ ಬದುಕಿಸುತ್ತಾನೆ ಎಂದು ಹೇಳುವುದನ್ನು ನಂಬಿಕೊಂಡಿದ್ದ. ಹೀಗಾಗಿ ಅದನ್ನು ಪರೀಕ್ಷಿಸಲು ಆತ ಮುಂದಾಗಿದ್ದ. ಇದೀಗ ಆತನ ಎರಡೂ ಕಾಲುಗಳು ಮುರಿದಿವೆ.

Comments are closed.