ರಾಷ್ಟ್ರೀಯ

ರಾಹುಲ್‌ಗಿಲ್ಲ ಮುಂಭಾಗದ ಸೀಟು: ಕಿಡಿಯಾದ ಕಾಂಗ್ರೆಸ್‌

Pinterest LinkedIn Tumblr


ಹೊಸದಿಲ್ಲಿ: ಗಣ ರಾಜ್ಯೋತ್ಸವದ ಪರೇಡ್‌ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರಿಗೆ 6ನೇ ಸಾಲಲ್ಲಿ ಆಸನ ಕಲ್ಪಿಸಿದ್ದಕ್ಕೆ ಕಾಂಗ್ರೆಸ್‌ ಕಿಡಿಕಾರಿದೆ. ಪ್ರಧಾನಿ ಮೋದಿ ಸರಕಾರ ಕೆಳ ಮಟ್ಟದ ರಾಜಕೀಯ ನಡೆಸುತ್ತಿದೆ ಎಂದು ಆರೋಪಿಸಿದೆ.

ರಾಹುಲ್‌ ಗಾಂಧಿ ಅವರಿಗೆ ರಾಜ್ಯ ಸಭೆ ಪ್ರತಿಪಕ್ಷ ನಾಯಕ ಗುಲಾಂ ನಬಿ ಆಜಾದ್‌ ಜತೆಗೆ 6ನೇ ಸಾಲಿನಲ್ಲಿ ಆಸನ ಕಲ್ಪಿಸಲಾಗಿತ್ತು. ಈ ಬಗ್ಗೆ ಅಸಮಾಧಾನದಿಂದ ಟ್ವೀಟ್‌ ಮಾಡಿರುವ ಕಾಂಗ್ರೆಸ್‌ ವಕ್ತಾರ ರಣದೀಪ್‌ ಸುರ್ಜೆವಾಲ ಅವರು, ‘ಮೋದಿ ಸರಕಾರ ಕೀಳು ಮಟ್ಟದ ರಾಜಕೀಯ ಮಾಡುತ್ತಿದೆ. ಕಾಂಗ್ರೆಸ್‌ ಅಧ್ಯಕ್ಷರನ್ನು ಬೇಕೆಂದೇ 6ನೇ ಸಾಲಿನಲ್ಲಿ ಕುಳ್ಳಿರಿಸಲಾಗಿದೆ. ಮೊದಲ ಸಾಲಿನ ಆಸನದಲ್ಲಿ ಕುಳ್ಳಿರಿಸುವ ಸಂಪ್ರದಾಯವನ್ನು ಮುರಿಯಲಾಗಿದೆ. ನಮಗೆ ಸಂವಿಧಾನದ ಉತ್ಸವ ಪ್ರಮುಖ’ ಎಂದಿದ್ದಾರೆ.

ಟ್ವೀಟ್‌ನಲ್ಲಿ ರಾಹುಲ್‌ ಗಾಂಧಿ ಹಿಂದಿನ ಸಾಲಲ್ಲಿ ಕುಳಿತಿರುವ ಚಿತ್ರವನ್ನು ಸುರ್ಜೇವಾಲ ಪೋಸ್ಟ್‌ ಮಾಡಿದ್ದಾರೆ.

मोदी सरकार की ओछी राजनीति जग ज़ाहिर!

कांग्रेस अध्यक्ष श्री राहुल गांधी को गणतंत्र दिवस के राष्ट्रीय पर्व पर अंहकारी शासकों ने सारी परंपराओं को दरकिनार करके पहले चौथी पंक्ति और फिर छठी पंक्ति में जानबूझकर बिठाया।

हमारे लिये संविधान का उत्सव ही सर्व प्रथम है। pic.twitter.com/8bRi017G8J
— Randeep S Surjewala (@rssurjewala) January 26, 2018

ಕಳೆದ ವರ್ಷ ಕಾಂಗ್ರೆಸ್‌ ಅಧ್ಯಕ್ಷರಾಗಿದ್ದ ಸೋನಿಯಾ ಗಾಂಧಿ ಅವರಿಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಜತೆಗೆ ಮೊದಲ ಸಾಲಿನಲ್ಲಿ ಆಸನ ಕಲ್ಪಿಸಲಾಗಿತ್ತು.

ಮೊದಲ ಸಾಲಿನಲ್ಲಿ ಮಾಜಿ ಪ್ರಧಾನಿಗಳಾದ ಎಚ್‌ ಡಿ ದೇವೇಗೌಡ ಮತ್ತು ಮನಮೋಹನ್‌ ಸಿಂಗ್‌ ಅವರಿಗೆ ಸ್ಥಾನ ಕಲ್ಪಿಸಲಾಗಿದ್ದು, ನಂತರ ಕೇಂದ್ರ ಸಚಿವೆ ಸ್ಮೃತಿ ಇರಾನಿ ಮತ್ತು ಥವಾಚಂದ್‌ ಗೆಹ್ಲೋಟ್‌ ಚಿತ್ರದಲ್ಲಿ ಕಾಣಿಸಿದ್ದಾರೆ.

‘ಅವಮಾನಿಸುವ ಉದ್ದೇಶ’ದಿಂದ ಎನ್‌ಡಿಎ ಸರಕಾರ ಗುರುವಾರ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರಿಗೆ 4ನೇ ಸಾಲಿನಲ್ಲಿ ಆಶನ ಕಲ್ಪಿಸಿದೆ ಎಂದು ಕಾಂಗ್ರೆಸ್‌ ನಾಯಕರು ಆರೋಪಿಸಿದ್ದರು.

Comments are closed.