ರಾಷ್ಟ್ರೀಯ

ತ್ರಿವಳಿ ತಲಾಖ್‌ ಚರ್ಚೆ: ಗಂಡ ಜೈಲಿಗೆ ಹೋದರೆ ಹೆಂಡತಿ ಪೋಷಣೆಗೆ ಹಣ ಕೊಡೋದ್ಯಾರು? ಕಾಂಗ್ರೆಸ್‌ ಪ್ರಶ್ನೆ

Pinterest LinkedIn Tumblr


ಹೊಸದಿಲ್ಲಿ: ಬಹು ಚರ್ಚಿತ ತ್ರಿವಳಿ ತಲಾಖ್ ಮಸೂದೆ ಕುರಿತು ರಾಜ್ಯಸಭೆಯಲ್ಲಿ ಚರ್ಚೆ ಆರಂಭವಾಗಿದೆ. ಈ ಮಸೂದೆಯನ್ನು ಸಂಸತ್‌ ಸಮಿತಿಗೆ ಕಳುಹಿಸಿಕೊಡಬೇಕೆಂದು ಕಾಂಗ್ರೆಸ್‌ ಪಟ್ಟು ಹಿಡಿದಿದೆ.

ಒಂದು ವೇಳೆ ತ್ರಿವಳಿ ತಲಾಕ್‌ ಕೊಟ್ಟ ಗಂಡನನ್ನು ಜೈಲಿಗೆ ಕಳುಹಿಸಿದರೆ ಆತನ ಪತ್ನಿಗೆ ಜೀವನಾಂಶ ನೀಡುವವರಾರು ಎಂದು ಕಾಂಗ್ರೆಸ್‌ ಸದಸ್ಯರು ಪ್ರಶ್ನಿಸಿದ್ದಾರೆ.

ಈ ಸಂದರ್ಭದಲ್ಲಿ ಚರ್ಚೆಯಲ್ಲಿ ಮಾತನಾಡಿದ ಕೇಂದ್ರ ಸಚಿವ ಅರುಣ್‌ ಜೇಟ್ಲಿ, ಪ್ರತಿಪಕ್ಷಗಳು ಮಂಡಿಸಿರುವ ನಿರ್ಣಯ ಅಮಾನ್ಯ ಎಂದು ತಿಳಿಸಿದ್ದಾರೆ.

ಮಸೂದೆಯನ್ನು ದಮನ ಮಾಡಲು ಕಾಂಗ್ರೆಸ್‌ ಪ್ರಯತ್ನಿಸುತ್ತಿದೆ ಎಂದು ಜೇಟ್ಲಿ ಆರೋಪಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಉಪ ಸಭಾಪತಿ ಪಿ.ಕೆ. ಕುರಿಯನ್, ಎರಡು ತಿದ್ದುಪಡಿಗಳನ್ನು ಪುರಸ್ಕರಿಸಲಾಗಿದೆ. ಆದರೂ ಚರ್ಚೆಯಲ್ಲಿ ಎಲ್ಲ ಸದಸ್ಯರು ಪಾಲ್ಗೊಳ್ಳಬೇಕಾಗಿದೆ ಎಂದರು.

ಪ್ರತಿಪಕ್ಷ ಸದಸ್ಯರು ಮತ್ತೆ ಗದ್ದಲ ಮಾಡಿದಾಗ ಕಲಾಪವನ್ನು ಶುಕ್ರವಾರಕ್ಕೆ ಮುಂದೂಡಲಾಗಿದೆ.

Comments are closed.