ರಾಷ್ಟ್ರೀಯ

ಸಹಾಯದ ನೆಪದಲ್ಲಿ ಕ್ಯಾನ್ಸರ್‌ ಸಂತ್ರಸ್ತೆ ಮೇಲೆ ಸ್ನೇಹಿತರಿಂದಲೇ ಅತ್ಯಾಚಾರ

Pinterest LinkedIn Tumblr


ಲಖನೌ: ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಬಾಲಕಿ ಮೇಲೆ ಆಕೆಯ ಸ್ನೇಹಿತರೇ ಅತ್ಯಾಚಾರ ಎಸಗಿದ್ದು, ಬಳಿಕ ಸಹಾಯ ಹಸ್ತ ನೀಡುತ್ತೇನೆ ಎಂದು ಬಂದಿದ್ದ ವ್ಯಕ್ತಿಯಿಂದಲೂ ಅತ್ಯಾಚಾರಕ್ಕೊಳಗಾದ ಘಟನೆ ಇಲ್ಲಿನ ಸರೋಜಿನಿನಗರ್‌ನಲ್ಲಿ ನಡೆದಿದೆ.

ಮಾಹಿತಿಗಳ ಪ್ರಕಾರ ಬಾಲಕಿ ಶನಿವಾರಂದು ರಾತ್ರಿ ಸುಮಾರು ಗಂಟೆಯ ಸುಮಾರಿಗೆ ಪರಿಚಯದ ಯುವಕ ಶುಭಮ್‌ ಎಂಬಾತನೊಂದಿಗೆ ಮನೆಯಿಂದ ಹೊರಗಡೆ ತೆರಳಿದ್ದಳು. ಬಳಿಕ ಆತ ತನ್ನ ಮತ್ತೋರ್ವ ಸ್ನೇಹಿತ ಸುಮಿತ್‌ ಎಂಬಾತನನ್ನು ಪರಿಚಯಿಸುತ್ತಾನೆ. ಮೂವರು ನೂಡಲ್ಸ್ ತಿನ್ನಲೆಂದು ಕೆಲ ದೂರ ಕ್ರಮಿಸಿದ ಬಳಿಕ ಯಾರೂ ಇಲ್ಲದ ಸ್ಥಳದಲ್ಲಿ ಆಕೆಯ ಮೇಲೆ ಇಬ್ಬರೂ ಅತ್ಯಾಚಾರ ಎಸಗಿ ಅಲ್ಲಿಂದ ಪರಾರಿಯಾಗಿದ್ದಾರೆ.

ಈ ಸಂದರ್ಭ ಬಾಲಕಿ ದಾರಿಹೋಕನೊಬ್ಬನ ಸಹಾಯ ಯಾಚಿಸಿದ್ದಾಳೆ, ಸಹಾಯ ಮಾಡುವ ನೆಪದಲ್ಲಿ ಬಂದ ಆತನೂ ದೌರ್ಜನ್ಯ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಸುಮಾರು ಮೂರು ಗಂಟೆಯ ಬಳಿಕ ಮನೆಗೆ ಬಂದ ಬಾಲಕಿ ಪೋಷಕರೊಡನೆ ಈ ವಿಷಯ ತಿಳಿಸಿದ್ದು, ಬಾಲಕಿಯ ತಂದೆ ಸರೋಜಿನಿನಗರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ‘

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ದಾರಿಹೋಕ ಬಂತಾರ ನಿವಾಸಿ ವೀರೇಂದ್ರ ಯಾದವ್‌ ಹಾಗೂ ಸುಮಿತ್‌ ಎಂಬಾತನನ್ನು ಬಂಧಿಸಿದ್ದಾರೆ.

Comments are closed.