ರಾಷ್ಟ್ರೀಯ

ಉ.ಪ್ರ ಪೊಲೀಸರಿಗೆ ಮತ್ತೇ ಎಮ್ಮೆ ಹುಡ್ಕೋ ಕೆಲ್ಸ!

Pinterest LinkedIn Tumblr

ಸೀತಾಪುರ (ಉ.ಪ್ರ.): ರಾಜಕಾರಣಿಯೊಬ್ಬರ ಕಣ್ಮರೆಯಾದ ಎಮ್ಮೆಗಳ ಹುಡುಕಾಟದಲ್ಲಿ ಉತ್ತರ ಪ್ರದೇಶ ಪೊಲೀಸರು ಮತ್ತೊಮ್ಮೆ ನಿರತವಾಗಿದ್ದಾರೆ.

ಹರ್‌ಗಾವ್‌ನ ಬಿಜೆಪಿ ಶಾಸಕ ಸುರೇಶ್‌ ರಾಹಿಯ ತೋಟದಿಂದ ತಾಯಿ ಹಾಗೂ ಕರು ಎಮ್ಮೆಗಳು ಕಳುವಾದ ಹಿನ್ನೆಲೆಯಲ್ಲಿ ಶಾಸಕರ ತಂದೆ, ಮಾಜಿ ಕೇಂದ್ರ ಸಚಿವ ರಾಮ್‌ಲಾಲ್‌ ರಾಹಿ ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ಆಧರಿಸಿ ಹುಡುಕಾಟ ಶುರು ಮಾಡಿದ ಪೊಲೀಸರು, ಸೋಮವಾರ ಸಂಜೆವರೆಗೂ ಎಮ್ಮೆಗಳು ಕಣ್ಣಿಗೆ ಬಿದ್ದಿಲ್ಲ ಎಂದಿದ್ದಾರೆ.

ನಾಲ್ಕು ವರ್ಷಗಳ ಹಿಂದೆ, ಸಮಾಜವಾದಿ ಪಕ್ಷ ದ ನಾಯಕ ಆಜಂಖಾನ್‌ ಅವರ ಎಮ್ಮೆಗಳು ರಾಮ್‌ಪುರದ ಅವರ ಫಾರ್ಮ್‌ಹೌಸ್‌ನಿಂದ ಕಾಣೆಯಾಗಿದ್ದವು. ಎಮ್ಮೆಗಳನ್ನು ಹುಡುಕಲಾಗದ ಮೂವರು ಪೊಲೀಸರನ್ನು ಆಗ ವಜಾಗೊಳಿಸಲಾಗಿತ್ತಲ್ಲದೆ, ರಾಮ್‌ಪುರದ ಪೂರ್ತಿ ಪೊಲೀಸ್‌ ಸಿಬ್ಬಂದಿಯನ್ನು ಎಮ್ಮೆ ಹುಡುಕಲು ಆದೇಶಿಸಲಾಗಿತ್ತು. 36 ಗಂಟೆಯೊಳಗೆ ಪೊಲೀಸರು ಎಮ್ಮೆಗಳನ್ನು ಹುಡುಕಿದ್ದರು.

Comments are closed.