ರಾಷ್ಟ್ರೀಯ

ಪತಿ ಭೇಟಿಗೆ ಅವಕಾಶ: ಹದಿಯಾ ತಂದೆ ಸುಪ್ರೀಂ ಕೋರ್ಟ್‌ಗೆ

Pinterest LinkedIn Tumblr


ಹೊಸದಿಲ್ಲಿ: ಕೇರಳದ ಲವ್‌ ಜಿಹಾದ್‌ ಪ್ರಕರಣ ಈಗ ಮತ್ತೆ ಸುಪ್ರೀಂ ಕೋರ್ಟ್‌ ಮೆಟ್ಟಿಲೇರುವ ಸಾಧ್ಯತೆಯಿದೆ.

ಈ ಪ್ರಕರಣದ ಕೇಂದ್ರ ಬಿಂದುವಾಗಿರುವ ಹದಿಯಾ ಜಹಾನ್‌ ಅವರನ್ನು ಭೇಟಿಮಾಡಲು ಆಕೆಯ ಪತಿ ಶೆಫಿನ್‌ಗೆ ಅವಕಾಶ ನೀಡಿದ್ದಕ್ಕಾಗಿ ತಮಿಳುನಾಡಿನ ಸೇಲಂನಲ್ಲಿರುವ ಶಿವರಾಜ್‌ ಹೋಮಿಯೋಪತಿ ಮೆಡಿಕಲ್‌ ಕಾಲೇಜಿನ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವುದಾಗಿ ಹದಿಯಾ ತಂದೆ ಕೆ ಎಂ ಅಶೋಕನ್‌ ಹೇಳಿದ್ದಾರೆ.

ಹದಿಯಾ ಅವರನ್ನು ಶಿವರಾಜ್‌ ಹೋಮಿಯೋಪತಿ ಮೆಡಿಕಲ್‌ ಕಾಲೇಜಿನ ಸುಪರ್ದಿಗೆ ವಹಿಸಿರುವ ಸುಪ್ರೀಂ ಕೋರ್ಟ್‌, ಅಲ್ಲಿ ಆಕೆಯ ವಿದ್ಯಾಭ್ಯಾಸಕ್ಕೆ ಅವಕಾಶ ಮಾಡಿಕೊಟ್ಟಿದೆ. ಅಲ್ಲದೆ, ಕಾಲೇಜಿನ ಪ್ರಾಂಶುಪಾಲರನ್ನೇ ಹದಿಯಾ ಅವರ ‘ಗಾರ್ಡಿಯನ್‌’ ಆಗಿ ಸುಪ್ರೀಂ ಕೋರ್ಟ್‌ ನೇಮಿಸಿದೆ.

”ಕಾಲೇಜು ಆಡಳಿತ ಮಂಡಳಿ, ಪತಿ ಶೆಫಿನ್‌ಗೆ ಹದಿಯಾಳನ್ನು ಭೇಟಿ ಮಾಡಲು ಅವಕಾಶ ನೀಡಿದೆ. ಉಗ್ರರೊಂದಿಗೆ ನಂಟು ಹೊಂದಿರುವ ವ್ಯಕ್ತಿಯೊಬ್ಬ ನನ್ನ ಮಗಳನ್ನು ಭೇಟಿ ಮಾಡಲು ಅವಕಾಶ ನೀಡಿರುವುದು ಭದ್ರತೆ ದೃಷ್ಟಿಯಿಂದ ಆತಂಕದ ವಿಚಾರ. ಕಾಲೇಜು ಆಡಳಿತ ಮಂಡಳಿ ಹದಿಯಾಳ ಭದ್ರತೆ ವಿಚಾರದಲ್ಲಿ ಸಾಕಷ್ಟು ಕ್ರಮಗಳನ್ನು ಕೈಗೊಂಡಿಲ್ಲ,” ಎಂದು ಅಶೋಕನ್‌ ಆರೋಪಿಸಿದ್ದಾರೆ.

ಅಲ್ಲದೆ, ಕಾಲೇಜು ಆವರಣದೊಳಗೆ ಪತ್ರಕರ್ತರನ್ನು ಭೇಟಿ ಮಾಡಲು ಹದಿಯಾಳಿಗೆ ಅವಕಾಶ ನೀಡಿದ್ದು ಸಹ ನ್ಯಾಯಾಲಯದ ಆದೇಶದ ಉಲ್ಲಂಘನೆ ಎಂದು ಅಶೋಕನ್‌ ಹೇಳಿದ್ದಾರೆ.

Comments are closed.