ರಾಷ್ಟ್ರೀಯ

ಲವ್ ಜಿಹಾದ್ ವಿರುದ್ಧದ ಜಾಗೃತಿ ಕಾರ್ಯಕ್ರಮಕ್ಕೆ ಯುವತಿಯರನ್ನು ಕಳಿಸುತ್ತಿರುವ ರಾಜಸ್ಥಾನ ಸರ್ಕಾರಿ ಶಾಲೆಗಳು!

Pinterest LinkedIn Tumblr


ರಾಜಸ್ಥಾನ: ಲವ್ ಜಿಹಾದ್ ಕುರಿತು ತಿಳಿದುಕೊಳ್ಳುವ ಕಾರ್ಯಕ್ರಮದಲ್ಲಿ ಹಾಜರಾಗುವಂತೆ ರಾಜಸ್ಥಾನ ಸರ್ಕಾರ ಎಲ್ಲಾ ಸರ್ಕಾರಿ ವಿದ್ಯಾರ್ಥಿನಿಯರು ಹಾಗೂ ಶಿಕ್ಷಕರಿಕ್ಗೆ ಸೂಚನೆ ನೀಡಿದೆ.

ಆರ್ ಎಸ್ಎಸ್ ನ ಅಂಗ ಸಂಸ್ಥೆಯಿಂದ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಈ ಕಾರ್ಯಕ್ರಮದಲ್ಲಿ ಲವ್ ಜಿಹಾದ್ ಹಾಗೂ ಕ್ರೈಸ್ತ ಮಿಷನರಿಗಳ ತಂತ್ರಗಳ ಕುರಿತು ಜಾಗೃತಿ ಮೂಡಿಸಲಾಗುತ್ತದೆ ಎಂದು ತಿಳಿದುಬಂದಿದೆ. ಕಾರ್ಯಕ್ರಮದ ಕುರಿತ ಕರಪತ್ರಗಳನ್ನು ಹಂಚಲಾಗುತ್ತಿದ್ದು, ಲವ್ ಜಿಹಾದ್: ಹಿಂದೂ ಯುವತಿಯರೇ ಎಚ್ಚರದಿಂದ ಇರಿ ಎಂದು ಶೀರ್ಷಿಕೆ ನೀಡಲಾಗಿದೆ.
ಹಿಂದೂ ಯುವತಿಯರನ್ನು ಮುಸ್ಲಿಂ ಯುವಕರು ಪ್ರೀತಿಸಿ ಮತಾಂತರಿಸಿ ಲವ್ ಜಿಹಾದ್ ನಡೆಸುತ್ತಿದ್ದಾರೆ ಎಂದು ಕರಪತ್ರದಲ್ಲಿ ಹೇಳಲಾಗಿದೆ.

Comments are closed.