ರಾಷ್ಟ್ರೀಯ

ಈಜಿಪ್ಟ್-ಸೂಡಾನ್ ನಡುವಿನ ಭೂಭಾಗಕ್ಕೆ ರಾಜ ಎಂದು ಘೋಷಿಸಿಕೊಂಡ ಭಾರತೀಯ

Pinterest LinkedIn Tumblr


ಹೊಸದಿಲ್ಲಿ: ಈಜಿಪ್ಟ್ ಮತ್ತು ಸುಡಾನ್ ನಡುವಿನ ಎರಡೂ ದೇಶಗಳಿಗೆ ಸೇರದ ವಿವಾದಾತ್ಮಕ ಭೂಪ್ರದೇಶಕ್ಕೆ ತಾನೇ ರಾಜ ಎಂದು 24 ವರ್ಷದ ಭಾರತೀಯ ಯುವ ಉದ್ಯಮಿ ಷೋಷಿಸಿಕೊಂಡಿದ್ದಾನೆ. ಎರಡೂ ದೇಶಗಳ ಗಡಿಯಲ್ಲಿ ಈ ಭೂಭಾಗ ಇದೆ.

ಈಜಿಪ್ಟ್, ಸೂಡಾನ್ ದೇಶಗಳ ಗಡಿಯಲ್ಲಿ ವಿವಾದಾತ್ಮಕ ಭೂಭಾಗ ಎನ್ನಿಸಿಕೊಂಡಿರುವ ಬಿರ್‌ತಾವಿಲ್ ಪ್ರದೇಶಕ್ಕೆ ಸ್ವಯಂಘೋಷಿತ ರಾಜನಾಗಿ ಪ್ರಕಟಿಸಿಕೊಂಡಿದ್ದಾನೆ ಓರ್ವ ಭಾರತೀಯ. ಈಜಿಪ್ಟ್, ಸೂಡಾನ್ ನಡುವೆ 2060 ಚದರ ಕಿಲೋ ಮೀಟರ್ ವಿಸ್ತೀರ್ಣದಲ್ಲಿದೆ ಈ ಭೂಭಾಗ. ಈ ಭೂಪ್ರದೇಶ ತಮ್ಮದಲ್ಲವೇ ಅಲ್ಲ ಎಂದು ಎರಡೂ ದೇಶಗಳು ಕೈಬಿಟ್ಟಿವೆ. ಯಾಕೆಂದರೆ ಇಲ್ಲಿ ಹೆಚ್ಚಾಗಿ ಉಗ್ರರು ಸಂಚರಿಸುವ ಪ್ರದೇಶವಾದ ಕಾರಣ ಎರಡೂ ದೇಶಗಳು ಆ ಭೂಪ್ರದೇಶ ತಮಗೆ ಸೇರಿಲ್ಲ ಎಂದು ಹೇಳಿವೆ.

ಇಂಧೋರ್ ಮೂಲದ ಯುವ ಉದ್ಯಮಿ ಸುಯಾಶ್ ದೀಕ್ಷಿತ್ ನೂರಾರು ಕಿ.ಮೀ ಪ್ರಯಾಣಿಸಿ ಬಿರ್‌ತಾವಿಲ್‌ನ ರಾಜ ಎಂದು ಘೋಷಿಸಿಕೊಂಡಿದ್ದಾನೆ. ಆ ಭೂಭಾಗಕ್ಕೆ ‘ಕಿಂಗ್‌ಡಮ್ ಆಫ್ ದೀಕ್ಷಿತ್’ ಎಂಬ ಹೆಸರನ್ನೂ ಇಟ್ಟಿದ್ದಾನೆ. ಅಷ್ಟೇ ಅಲ್ಲದೆ ದೇಶವನ್ನು ಘೋಷಿಸಿದ ಸಂದರ್ಭದಲ್ಲಿ ಅಲ್ಲಿ ಒಂದು ಬೀಜವನ್ನು ಬಿತ್ತಿ ನೀರನ್ನು ಎರೆದ್ದಾನೆ. ಇನ್ನು ಮುಂದೆ ಈ ಭೂಭಾಗಕ್ಕೆ ನಾನೇ ರಾಜ ಎಂದು ಘೋಷಿಸಿ ಈ ಸಂಬಂಧ ಫೇಸ್‌ಬುಕ್‌‍ನಲ್ಲಿ ಹಲವು ಫೋಟೋಗಳನ್ನು ಹಂಚಿಕೊಂಡಿದ್ದಾನೆ.

ಅಷ್ಟೇ ಅಲ್ಲದೆ ತನ್ನ ತಂದೆ ಹುಟ್ಟುಹಬ್ಬದ ಪ್ರಯುಕ್ತ ಆ ದೇಶಕ್ಕೆ ಅಧ್ಯಕ್ಷನಾಗಿ ತನ್ನ ತಂದೆಯ ಹೆಸರನ್ನು ಪ್ರಕಟಿಸಿದ್ದಾನೆ. ಹ್ಯಾಪಿ ಬರ್ತ್ ಡೇ ಪಪ್ಪಾ ಎಂದು ತನ್ನ ವಾಲ್ ಮೇಲೆ ಬರೆದುಕೊಂಡಿದ್ದಾನೆ. ಆ ಬಳಿಕ ‘ಕಿಂಗ್‌ಡಮ್ ಆಫ್ ದೀಕ್ಷಿತ್‌’ನ್ನು ದೇಶವಾಗಿ ಪರಿಗಣಿಸಬೇಕೆಂದು ವಿಶ್ವಸಂಸ್ಥೆಗೆ ಆನ್‌ಲೈನ್‌ನಲ್ಲಿ ಅರ್ಜಿಯನ್ನೂ ಸಹ ಸಲ್ಲಿಸಿದ್ದಾನೆ. ಇದುವರೆಗೆ ತನಗೆ 800 ಮಂದಿ ಬೆಂಬಲ ಸೂಚಿಸಿದ್ದಾರೆಂದು ಹೇಳಿದ್ದಾನೆ.

Comments are closed.