ರಾಷ್ಟ್ರೀಯ

ಕೇಂದ್ರ ಬಜೆಟ್: ತಂಬಾಕು ಪ್ರಿಯರಿಗೆ ಕಹಿ ಸುದ್ದಿ

Pinterest LinkedIn Tumblr


ನವದೆಹಲಿ (ಜ.31): ಇದೇ ಮೊದಲ ಬಾರಿಗೆ ನಾಳೆ ಕೇಂದ್ರ ಮತ್ತು ರೈಲ್ವೇ ಬಜೆಟ್ ಮಂಡನೆಯಾಗಲಿದ್ದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಉಭಯ ಸದನಗಳನ್ನುದ್ದೇಶಿಸಿ ಭಾಷಣ ಮಾಡುತ್ತಾ, ನರೇಂದ್ರ ಮೋದಿ ಸರ್ಕಾರದ ಸಾಧನೆಗಳ ಬಗ್ಗೆ ಶ್ಲಾಘಿಸಿದ್ದಾರೆ.
ನರೇಂದ್ರ ಮೋದಿ ಸರ್ಕಾರವು ಬಡವರ ಜೀವನ ಗುಣಮಟ್ಟವನ್ನು ಸುಧಾರಿಸಿದೆ. ರೈತರ ಜೀವನಮಟ್ಟ ಸುಧಾರಣೆ, ಮಹಿಳಾ ಸಬಲೀಕರಣ, ಬಡವರಿಗೆ ಎಲ್ ಪಿಜಿ ಸಬ್ಸಿಡಿ ನೀಡಿ ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ದಿದೆ. ನೋಟು ಅಮಾನ್ಯ ಕ್ರಮವು ಕಪ್ಪುಹಣ ಹಾಗೂ ಭ್ರಷ್ಟಾಚಾರ ವಿರುದ್ಧದ ಹೋರಾಟವಾಗಿದ್ದು ಇದೊಂದು ಒಳ್ಳೆಯ ನಡೆ ಎಂದು ಶ್ಲಾಘಿಸಿದ್ದಾರೆ.ನವದೆಹಲಿ (ಫೆ.01): ತಂಪಾಕು ಉತ್ಪನ್ನಗಳ ಮೇಲೆ ತೆರಿಗೆಗಳನ್ನು ಏರಿಕೆ ಮಾಡುವ ಮೂಲಕ ತಂಬಾಕು ಪ್ರಿಯರ ಕಿಸೆಗೆ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಬಿಸಿ ಮುಟ್ಟಿಸಿದ್ದಾರೆ. ಜತೆಗೆ ಸಾಂಪ್ರದಾಯಿಕ ಇಂಧನಗಳನ್ನು ನೆಚ್ಚಿಕೊಂಡವರಿಗೆ ಸಚಿವರು ಸಿಹಿ ಸುದ್ದಿ ನೀಡಿದ್ದಾರೆ.
ಇನ್ಮುಂದೆ ಈ ವಸ್ತುಗಳು ದುಬಾರಿ:
ಸಿಗರೇಟ್, ಪಾನ್ ಮಸಾಲಾ, ಸಿಗಾರ್, ಬೀಡಿ, ತಂಬಾಕು ಉತ್ಪನ್ನಗಳು
ಎಲ್’ಇಡಿ ದೀಪದ ಭಾಗಗಳು
ಗೋಡಂಬಿ
ಅಲ್ಯುಮಿನಿಯಂ ಅದಿರು
ಬೆಳ್ಳಿ ನಾಣ್ಯ ಹಾಗೂ ಮೆಡಲ್’ಗಳು
ಮೊಬೈಲ್ ಫೋನ್’ನಲ್ಲಿ ಬಳಸಲಾಗುವ ಪ್ರಿಂಟೆಡ್ ಸರ್ಕ್ಯೂಟ್ ಬೋರ್ಡ್
ಈ ವಸ್ತುಗಳು ಅಗ್ಗ:
ಆನ್’ಲೈನ್ ಖರೀದಿಸಿದ ರೈಲ್ವೇ ಟಿಕೆಟ್
ಸೋಲಾರ್ ಪ್ಯಾನೆಲ್’ನಲ್ಲಿ ಬಳಸಲಾಗುವ ಗಾಜು
ಪವನಶಕ್ತಿಯಿಂದ ಓಡುವ ಜನರೇಟರ್
ಪಿಓಎಸ್ ಮಶೀನ್’ಗಳು, ಬಯೋಮೆಟ್ರಿಕ್ ಯಂತ್ರಗಳು
ರಕ್ಷಣಾ ಸೇವೆಗಳಿಗೆ ಸಾಮೂಹಿಕ ವಿಮೆ

Comments are closed.