ರಾಷ್ಟ್ರೀಯ

ಶಶಿಕಲಾ ಮುಖ್ಯಮಂತ್ರಿಯಾಗಲು ಒತ್ತಾಯ

Pinterest LinkedIn Tumblr

sasikala
ಚೆನ್ನೈ(ಜ.02): ಜಯಲಲಿತಾ ಆಪ್ತೆ ಶಶಿಕಲಾ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ಚಿನ್ನಮ್ಮನಿಗೆ ಸಿಎಂ ಗಾದಿ ನೀಡಬೇಕೆಂಬ ಕೂಗು ಕೇಳಿಬರುತ್ತಿದೆ. ಅಣ್ಣಾ ಡಿಎಂಕೆಯ ಹಿರಿಯ ಮುಖಂಡ ಮತ್ತು ಲೋಕಸಭೆಯ ಉಪಾಧ್ಯಕ್ಷ ತಂಬಿ ದೊರೈ ಶಶಿಕಲಾ ಸಿಎಂ ಸ್ಥಾನಕ್ಕೇರಬೇಕೆಂದು ಒತ್ತಾಯಿಸಿದ್ಧಾರೆ.
`ಗೌರವಾನ್ವಿತ ಚಿನ್ನಮ್ಮ(ಶಶಿಕಲಾ) ಸಿಎಂ ಗಾದಿಗೆ ಬೇಕಾದ ಬುದ್ದಿವಂತಿಕೆ, ಸಾಮರ್ಥ್ಯ ಮತ್ತು ಜನಾನುರಾಗಿಯಾಗಿದ್ದಾರೆ. ಹೀಗಾಗಿ, ತಮಿಳುನಾಡು ಸಿಎಂ ಜವಾಬ್ದಾರಿಯನ್ನ ವಹಿಸಿಕೊಳ್ಳಬೇಕು. ಗೌರವಾನ್ವಿತ ಚಿನ್ನಮ್ಮ ಸಿಎಂ ಸ್ಥಾನ ಅಲಂಕರಿಸುವಂತೆ ಪಕ್ಷದ ಕಾರ್ಯಕರ್ತರ ಪರವಾಗಿ ಸವಿನಯವಾಗಿ ಪ್ರಾರ್ಥಿಸುತ್ತೇನೆ.
`ಅಮ್ಮನ ನಿಧನದ ಬಳಿಕ ಪಕ್ಷ ೇನಾಗಬಹುದೆಂದು ಕೋಟ್ಯಂತರ ಕಾರ್ಯಕರ್ತರು ಸೇರಿದಂತೆ ನಾವೆಲ್ಲರೂ ದಿಗ್ಭ್ರಮೆಗೊಳಗಾಗಿದ್ದೆವು. ಲೈಟ್ ಹೌಸ್ ರೀತಿ ಚಿನ್ನಮ್ಮ ನಮ್ಮನ್ನೆಲ್ಲ ಕಾಪಾಡಿದರು ಎಂದು ತಂಬಿದೊರೈ ಹೇಳಿದ್ಧಾರೆ.

Comments are closed.