ರಾಷ್ಟ್ರೀಯ

ಹೊಸ ವರ್ಷದಲ್ಲಿ ಕೊಳಲು ನುಡಿಸಿದ ಲಾಲೂ ಪುತ್ರ

Pinterest LinkedIn Tumblr

lalu-son-krishna
ಪಾಟ್ನಾ: ಹೊಸ ವರ್ಷವನ್ನು ಒಬ್ಬೊಬ್ಬರು ಒಂದೊಂದು ರೀತಿ ಆಚರಿಸುತ್ತಾರೆ. ಪಾರ್ಟಿಗೆ, ಮಾಲ್ ಗೆ ಹೋಗುವುದು, ಫ್ರೆಂಡ್ಸ್, ಬಂಧುಗಳ ಜೊತೆ ಸೇರಿ ಹರಟೆ ಹೊಡೆಯುವುದು, ಕೇಕ್ ಕತ್ತರಿಸುವುದು ಇತ್ಯಾದಿ ಮಾಮೂಲು.
ಆದರೆ ಬಿಹಾರದ ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರ ಪುತ್ರ ಅಲ್ಲಿನ ಆರೋಗ್ಯ ಖಾತೆ ಸಚಿವ ತೇಜ್ ಪ್ರತಾಪ್ ಯಾದವ್ ವಿಶಿಷ್ಟ ರೀತಿಯಲ್ಲಿ ಹೊಸ ವರ್ಷವನ್ನು ಆಚರಿಸಿದ್ದಾರೆ.
ಕೃಷ್ಣನಂತೆ ವೇಷ ತೊಟ್ಟು ಕೈಯಲ್ಲೊಂದು ಕೊಳಲು ಹಿಡಿದುಕೊಂಡು ಊದುತ್ತಾ ಹೊಸ ವರ್ಷವನ್ನು ಸಂತೋಷದಿಂದ ಬರಮಾಡಿಕೊಂಡಿದ್ದಾರೆ.
ಯಾಕೆ ಹೀಗೆ ಎಂದು ಅವರನ್ನು ಕೇಳಿದಾಗ, ಬೃಂದಾವನದ ಭಕ್ತರೊಬ್ಬರು ಇದನ್ನೆಲ್ಲಾ ನನಗೆ ಉಡುಗೊರೆಯಾಗಿ ಕೊಟ್ಟು ಹೊಸ ವರ್ಷಕ್ಕೆ ತೊಟ್ಟುಕೊಳ್ಳಿ ಎಂದು ಹೇಳಿದರು. ಹಾಗಾಗಿ ಇಂದು ಈ ರೀತಿ ಆಚರಿಸಿಕೊಳ್ಳುತ್ತಿದ್ದೇನೆ ಎಂದು ತಿಳಿಸಿದರು.
ತಮ್ಮ ವಿಶಿಷ್ಟ ಶೈಲಿ, ಮಾತಿನಿಂದ ಹೆಸರಾಗಿರುವ ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ರಂತೆ ಇದೀಗ ಅವರ ಮಗನು ಕೂಡ ವಿಶೇಷತೆ ಮಾಡಿ ಸುದ್ದಿಯಾಗಿದ್ದಾರೆ.

Comments are closed.