ರಾಷ್ಟ್ರೀಯ

ಬೇರೆ ಪಕ್ಷಕ್ಕೂ ನಿಮಗೂ ಏನು ವ್ಯತ್ಯಾಸ: ಕೇಜ್ರಿವಾಲ್ ಗೆ ಅಣ್ಣಾ ಹಜಾರೆ ಪ್ರಶ್ನೆ

Pinterest LinkedIn Tumblr

Hazare
ನವದೆಹಲಿ(ಡಿ.25): ಹಲವು ದಿನಗಳ ಬಳಿಕ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ, ಆಮ್ ಆದ್ಮಿ ವರಿಷ್ಠ ಮತ್ತು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಆಮ್ ಆದ್ಮಿ ವೆಬ್ ಸೈಟ್`ನಿಂದ ದಾನಿಗಳ ಹೆಸರನ್ನ ತೆಗೆದಿರುವ ಬಗ್ಗೆ ಪ್ರಶ್ನಿಸಿರುವ ಅಣ್ಣಾ ಹಜಾರೆ, ಬೇರೆ ಪಕ್ಷಗಳಿಗೂ ನಿಮಗೂ ಏನು ವ್ಯತ್ಯಾಸ ಎಂದು ಪ್ರಶ್ನಿಸಿದ್ದಾರೆ. ಹಲವು ಹೋರಾಟಗಾರರು ಈ ಬಗ್ಗೆ ನನಗೆ ಆಕ್ಷೇಪಣೆ ಸಲ್ಲಿಸಿದ್ದಾರೆ ಎಂದು ಹಜಾರೆ ಹೇಳಿದ್ದಾರೆ.
`ಆಮ್ ಆದ್ಮಿ ಪಕ್ಷಕ್ಕೆ ಎಲ್ಲ ದಾನಿಗಳು ನೀಡಿರುವ ದಾನದ ಬಗ್ಗೆ ಮಾಹಿತಿ ಪ್ರದರ್ಶಿಸುತ್ತೇವೆ ಎಂದು ನೀವು ಮಾತಿ ಕೊಟ್ಟಿದ್ದೀರಿ. ಜೂನ್ 2016ರಿಂದ ನಿಮ್ಮ ವೆಬ್ ಸೈಟ್`ನಲ್ಲಿ ಈ ಕುರಿತ ಮಾಹಿತಿ ಮಾಯವಾಗಿರುವ ಬಗ್ಗೆ ನನಗೆ ಸಾಮಾಜಿಕ ಕಾರ್ಯಕರ್ತರು ಬರೆದು ತಿಳಿಸಿದ್ದಾರೆ ಎಂದು ಆಮ್ ಆದ್ಮಿಯ ರಾಷ್ಟ್ರೀಯ ಸಂಚಾಲಕರಿಗೆ ಬರೆದಿರುವ ಪತ್ರದಲ್ಲಿ ಅಣ್ಣಾ ಹಜಾರೆ ತಿಳಿಸಿದ್ಧಾರೆ.
`ಬದಲಾವಣೆ ತರುವುದಾಗಿ ನನಗೂ ಸೇರಿದಂತೆ ಈ ಸಮಾಜಕ್ಕೆ ನೀನು ಮಾತು ಕೊಟ್ಟಿದ್ದೆ. ನೀನು ನಿನ್ನ ಮಾತಿನಂತೆ ನಡೆದುಕೊಳ್ಳದಿರುವ ಬಗ್ಗೆ ನನಗೆ ಅತೀವ ದುಃಖವಾಗಿದೆ’ ಎಂದು ಅಣ್ಣಾ ಹಜಾರೆ ಬೇಸರ ವ್ಯಕ್ತಪಡಿಸಿದ್ದಾರೆ.

Comments are closed.