ರಾಷ್ಟ್ರೀಯ

ಲಷ್ಕರ್ ಹಿರಿಯ ಕಮಾಂಡರ್ ಹತ್ಯೆ

Pinterest LinkedIn Tumblr

indian-armyಶ್ರೀನಗರ: ಭದ್ರತಾ ಪಡೆಗಳ ಜೊತೆಗೆ ನಡೆದ ಎರಡು ವಿಭಿನ್ನ ಎನ್ಕೌಂಟರ್ ಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಇಬ್ಬರು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ.
ಅನಂತನಾಗ್ ಮತ್ತು ಬಾರಾಮುಲ್ಲಾ ಜಿಲ್ಲೆಗಳಲ್ಲಿ ಈ ಎನ್ಕೌಂಟರ್ ನಡೆದಿದೆ. ಅನಂತನಾಗ್ ಜಿಲ್ಲೆಯ ಶ್ರೀಗುಫ್ವರದಲ್ಲಿ ಬೆಳಗ್ಗೆ ಸೇನೆಯ ಗಸ್ತು ಪಡೆಯ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದರು. ಇದಕ್ಕೆ ಸೇನೆ ಪ್ರತಿಕ್ರಯಿಸಿದ್ದರಿಂದ, ಬಸಿತ್ ಅಹ್ಮದ್ ದರ್ ಎಂದು ಗುರುತಿಸಲಾಗಿರುವ ಭಯೋತ್ಪಾದಕ ಹತ್ಯೆಯಾಗಿದ್ದಾನೆ.
ದರ್ ಇತೀಚೆಗಷ್ಟೇ ಹಿಜಬುಲ್ ಮುಜಾಹಿದೀನ್ ಭಯೋತ್ಪಾದಕ ಸಂಘಟನೆ ಸೇರಿದ್ದ.
ಮತ್ತೊಂದು ಎನ್ಕೌಂಟರ್ ನಲ್ಲಿ ವಿದೇಶಿ ಭಯೋತ್ಪಾದಕ ಎಂದು ನಂಬಲಾದ ಒಬ್ಬನನ್ನು ಬಾರಾಮುಲ್ಲಾ ಜಿಲ್ಲೆಯ, ಸೋಪೋರ್ ನ ಬೊಮೈನಲ್ಲಿ ಹತ್ಯೆಗೈಯ್ಯಲಾಗಿದೆ.
ಇವನ ಗುರುತು ಮತ್ತು ಇವನು ಸೇರಿದ ಭಯೋತ್ಪಾದಕ ಸಂಘಟನೆಯ ಗುರುತು ಇನ್ನು ಸಿಗಬೇಕಿದೆ.
ಆದರೆ ಪೊಲೀಸ್ ಮೂಲಗಳ ಪ್ರಕಾರ ಹತ್ಯೆಯಾದ ಭಯೋತ್ಪಾದಕ, ಲಷ್ಕರ್ ಎ ತೈಬಾದ ಹಿರಿಯ ಕಮಾಂಡರ್ ಅಬು ಬಕರ್ ಎಂದು ತಿಳಿದುಬಂದಿದೆ.

Comments are closed.