ರಾಷ್ಟ್ರೀಯ

ಶ್ರೀಮಂತರು ನಿಮ್ಮ ಕಾಲಿಗೆ ಬೀಳುವಂತೆ ಮಾಡುತ್ತೇನೆ; ಜನ್‍ಧನ್ ಖಾತೆದಾರರಿಗೆ ಮೋದಿ

Pinterest LinkedIn Tumblr

modhiiಲಕ್ನೋ: ಶ್ರೀಮಂತರು ನಿಮ್ಮ ಕಾಲಿಗೆ ಬೀಳುವಂತೆ ಮಾಡುತ್ತೇನೆ. ಯಾವುದೇ ಕಾರಣಕ್ಕೂ ನೀವು ಜಮೆ ಮಾಡಿದ ಹಣವನ್ನು ತೆಗೆಯಬೇಡಿ ಎಂದು ಜನ್‍ಧನ್ ಖಾತೆದಾರರಲ್ಲಿ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ.

ಉತ್ತರ ಪ್ರದೇಶದ ಮೊರಾದಾಬಾದ್‍ನಲ್ಲಿ ಆಯೋಜನೆಗೊಂಡಿದ್ದ ಬಿಜಿಪಿ ಪರಿವರ್ತನಾ ರ್ಯಾಲಿಯಲ್ಲಿ ಮಾತನಾಡಿದ ಅವರು, ನೋಟ್ ಬ್ಯಾನ್‍ಗೊಳಿಸಿದ ಬಳಿಕ ಶ್ರೀಮಂತರು ಬ್ಯಾಂಕ್ ಮುಂದೆ ಕ್ಯೂ ನಿಲ್ಲದೇ ಬಡವರ ಮನೆಯ ಮುಂದೆ ರಹಸ್ಯವಾಗಿ ಕ್ಯೂ ನಿಂತುಕೊಂಡಿದ್ದಾರೆ. ನಿಮ್ಮ ಮೂಲಕ ಹಣವನ್ನು ಜಮೆ ಮಾಡಿದ್ದಾರೆ. ಶ್ರೀಮಂತರು ಈಗ ಹಣವನ್ನು ತೆಗೆಯುವಂತೆ ಹೇಳಿದರೂ, ತನಿಖೆ ಪೂರ್ಣಗೊಳ್ಳುವರೆಗೂ ಹಣವನ್ನು ತೆಗೆಯಬೇಡಿ ಎಂದು ಖಾತೆದಾರರಲ್ಲಿ ಕೇಳಿಕೊಂಡರು.

ಭಾರತದಲ್ಲಿ ಬಡವರು ಯಾವತ್ತೂ ಹಣಕ್ಕಾಗಿ ಭಿಕ್ಷೆ ಬೇಡಬಾರದು. ಶ್ರೀಮಂತರು ಇಲ್ಲಿಯವರೆಗೆ ನಿಮ್ಮ ಜೊತೆ ಆಟವಾಡುತ್ತಿದ್ದರು. ಈಗ ಅವರು ನಿಮ್ಮ ಮನೆಗೆ ಬಂದು ಬೇಡಿಕೊಳ್ಳುವುದನ್ನು ನೀವು ನೋಡುತ್ತೀರಿ. ನೀವು ಬ್ಯಾಂಕಿನಿಂದ ಹಣವನ್ನು ತೆಗೆಯದೇ ಇದ್ದರೆ ಆ ಶ್ರೀಮಂತರನ್ನು ಜೈಲಿಗೆ ಅಟ್ಟಿ ಅವರ ಹಣವನ್ನು ನಿಮಗೆ ತಲುಪಿಸುತ್ತೇನೆ ಎಂದು ಮೋದಿ ಈ ವೇಳೆ ಭರವಸೆ ನೀಡಿದರು.

ಇಲ್ಲಿಯವರೆಗೆ ಮನಿ ಮನಿ ಮನಿ ಎಂದು ಹೇಳುತ್ತಿದ್ದ ಭ್ರಷ್ಟರು ಈಗ ಮೋದಿ ಮೋದಿ ಮೋದಿ ಎಂದು ಹೇಳುತ್ತಿದ್ದಾರೆ. ಹಣ ತೆಗೆಯುವಂತೆ ನಿಮ್ಮ ಒತ್ತಡ ಹೇರಿದರೆ ಹಣ ಡ್ರಾ ಮಾಡಲು ಸಾಧ್ಯವಿಲ್ಲ ಎಂದು ಹೇಳಿಬಿಡಿ. ಮತ್ತಷ್ಟು ಒತ್ತಡ ಹಾಕಿದರೆ ಪ್ರಧಾನಿಗೆ ಪತ್ರ ಬರೆಯುತ್ತೇನೆ ಎಂದು ತಿಳಿಸಿ. ಈಗ ನೀವು ನಮಗೆ ‘ಪವರ್’ ಕೊಟ್ಟರೆ ಮುಂದೆ ‘ಪವರ್ಟಿ’ಯನ್ನು ನಿರ್ಮೂಲನೆ ಮಾಡುತ್ತೇವೆ. ಕಪ್ಪು ಹಣದ ವಿರುದ್ಧದ ಹೋರಾಟಕ್ಕೆ ನಮಗೆ ಸಹಕಾರ ನೀಡಿ ಎಂದು ಮೋದಿ ಜನರಲ್ಲಿ ಕೇಳಿಕೊಂಡರು.

Comments are closed.