ಮೊಹಾಲಿ: ಹೊಸದಾಗಿ ಮದುವೆಯಾಗಿದ್ದ ವರ ಮೊದಲ ರಾತ್ರಿ ನವ ವಧುವಿನ ಕೋಣೆಗೆ ತೆರಳಿ ಆಕೆಯನ್ನು ಬೆಲ್ಟ್ನಿಂದ ಹಿಗ್ಗಾಮುಗ್ಗಾ ಥಳಿಸಿದ ಘಟನೆ ನಡೆದಿದೆ.
ಮೊಹಾಲಿಯಲ್ಲೊಬ್ಬ ವರ ಮದುವೆಯ ಮೊದಲ ರಾತ್ರಿ ನವ ವಧುವಿನ ಕೋಣೆಯೊಳಗೆ ತೆರಳಿ ಬೆಲ್ಟ್’ನಿಂದ ಆಕೆಯ ಮುಖ ಮೂತಿ ನೋಡದೆ ಥಳಿಸಿರುವ ಘಟನೆ ಬೆಳಕಿಗೆ ಬಂದಿದೆ. ವಾಸ್ತವದಲ್ಲಿ ಇವರಿಬ್ಬರ ಮದುವೆ ಕಳೆದ ಒಂದು ತಿಂಗಳ ಹಿಂದೆಯೇ ಮ್ಯಾಟ್ರಿಮೋನಿಯಲ್ ವೆಬ್ ಸೈಟ್ ಮೂಲಕ ನಡೆದಿತ್ತು.
ಈ ಮಹಿಳೆ ಮೂಲತಃ ಉತ್ತರಾಖಂಡ್’ನವರಾಗಿದ್ದು, ಇತ್ತೀಚೆಗಷ್ಟೇ ಯುಎಸ್’ನಿಂದ ಬಂದಿದ್ದರು. ಮ್ಯಾಟ್ರಿಮೋನಿಯಲ್ ವೆಬ್’ಸೈಟ್’ನಲ್ಲಿ ವಿಜಯ್’ನನ್ನು ಕಂಡ ಮಹಿಳೆ ಆತನನ್ನು ಇಷ್ಟಪಟ್ಟು ಮದುವೆಯಾಗಿದ್ದಳು ಆದರೆ ಮದುವೆಯಾದ ಮೊದಲ ರಾತ್ರಿಯೇ ಹಣಕ್ಕಾಗಿ ಪೀಡಿಸಿದ ಈತನಿಗೆ ಈ ಯುವತಿ ನಿರಾಕರಿಸಿದ್ದಳು ಇದರಿಂದ ಸಿಟ್ಟಿಗೆದ್ದ ವಿಜಯ್ ಮುಖ ಮೂತಿ ನೋಡದೆ ಬೆಲ್ಟ್’ನಿಂದ ಆಕೆಗೆ ಥಳಿಸಿದ್ದ. ಈ ವಿಚಾರವಾಗಿ ದೂರು ನೀಡಿದ್ದರೂ ಪೊಲೀಸರು ಮಾತ್ರ ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ. ಹೀಗಾಗಿ ಮಹಿಳೆ ನೇರವಾಗಿ ಡೆಪ್ಯುಟಿ ಸಿಎಂ ಸಹಾಯವಾಣಿಗೆ ಕರೆ ಮಾಡಿ ವಿಷಯವನ್ನು ತಿಳಿಸಿದ್ದಾಳೆ.
ಮಹಿಳೆಯ ಬೆನ್ನು, ಸೊಂಟ ಹಾಗೂ ಕಾಲಿನ ಮೇಲೆ ಬೆಲ್ಟ್’ನಿಂದ ಹೊಡೆದಿರುವ ಗುರುತುಗಳು ಕಂಡು ಬಂದಿವೆ. ಇಷ್ಟಾದರೂ ಪೊಲೀಸರು ಮಾತ್ರ ಈ ವಿಚಾರ ತಮಗೆ ಸಂಬಂಧಪಟ್ಟದಲ್ಲ ಎಂಬಂತಿದ್ದಾರೆ.
ಮಾಧ್ಯಮಗಳಲ್ಲಿ ಪ್ರಸಾರವಾದ ಸುದ್ದಿಯನ್ವಯ ಹಿಂಸೆಗೊಳಗಾದ ಮಹಿಳೆ ‘ನನ್ನ ಪತಿ ವಿಜಯ್ ನನ್ನನ್ನು ಅದೆಷ್ಟು ಹಿಂಸಿಸುತ್ತಾನೆಂದರೆ ಆತನ ಹೊಡೆತಗಳ ಗುರುತು ನನ್ನ ಮೈ ಮೇಲೆ ಅಚ್ಚೊತ್ತಿದಂತಿವೆ. ಆದರೂ ಪೊಲೀಸರು ಮಾತ್ರ ಕಣ್ಮುಚ್ಚಿಕೊಂಡಿದ್ದಾರೆ. ನನ್ನ ಪತಿಗೆ ಬಿಜೆಪಿ ನೇತಾರರೊಂದಿಗೆ ಉತ್ತಮ ಸಂಬಂಧವಿದೆ. ಪೊಲೀಸರು ಮೇಲೆ ಕ್ರಮ ಕೈಗೊಳ್ಳದಂತೆ ಚೊತ್ತಡ ಹೇರಿದ್ದಾನೆ’ ಎಂದಿದ್ದಾಳೆ.
ಇನ್ನು ಡೆಪ್ಯುಟಿ ಸಿಎಂ ಸಹಾಯವಾಣಿಗೆ ಕರೆ ಮಾಡಿದ ಮಹಿಳೆ ‘ಸಾಹೇಬರೆ ನಿಮ್ಮ ಎಸ್’ಎಚ್’ಒ ಮಹಿಳೆಯರ ಸಹಾಯ ಮಾಡಲು ವಿಫಲವಾಗಿದೆ. ಈಗ ಕೇವಲ ಆತ್ಮಹತ್ಯೆಯೊಂದೇ ನನೆದುರಿಗಿರುವ ಆಯ್ಕೆ. ಸಾಯುವ ಮೊದಲು ನನಗಿರುವ ನಿಮ್ಮ ಬಳಿ ನನ್ನದೊಂದು ವಿನಂತಿ, ಮಹಿಳೆಯರ ಸಹಾಯ ಮಾಡದೇ, ಅವರನ್ನು ನೋಡಿ ನಗುವ ಇಂತಹ ಹೇಡಿ ಅಧಿಕಾರಿಗಳನ್ನು ಅಮಾನತ್ತುಗೊಳಿಸಿ. ಇಷ್ಟೇ ನಿಮ್ಮಲ್ಲಿ ಕೇಳಿಕೊಳ್ಳುತ್ತಿರುವುದು’ ಎಂದಿದ್ದರು.
ಇಷ್ಟೆಲ್ಲಾ ನಡೆದ ಬಳಿಕವೂ ಪೊಲೀಸರು ಆಕೆಯ ಪತಿ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ರಾಜಿ ಒಪ್ಪಂದ ಮಾಡಲು ಕರೆಸಿದ್ದಾರೆ.
Comments are closed.