ರಾಷ್ಟ್ರೀಯ

ತಂದೆಗೆ ಕಣ್ಣೀರು ತರಿಸುವುದು ಶೋಭೆ ತರಲ್ಲ: ಅಖಿಲೇಶ್ ಗೆ ದೇವೇಗೌಡ 

Pinterest LinkedIn Tumblr

devegowdaನವದೆಹಲಿ: ನನ್ನ ಆತ್ಮಿಯ ಮಿತ್ರನಿಗೆ ಕಣ್ಣೀರು ತರಿಸುವಂತೆ ಮಾಡಬೇಡ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಉತ್ತರಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್‌ಗೆ ಸಲಹೆ ನೀಡಿದ್ದಾರೆ.

13 ರಾಜಕೀಯ ಪಕ್ಷಗಳು ಮುಲಾಯಂ ನಾಯಕತ್ವವನ್ನು ಅವಿರೋಧವಾಗಿ ಆಯ್ಕೆ ಮಾಡಿದ್ದವು. ಅಂತಹ ಮಹಾನ್ ನಾಯಕನಿಗೆ ಕಣ್ಣೀರು ತರಿಸುವುದು ಪುತ್ರನಿಗೆ ಶೋಭೆ ತರುವುದಿಲ್ಲ ಎಂದು ಹೇಳಿದ್ದಾರೆ.

ಉತ್ತರಪ್ರದೇಶದ ಸಮಾಜವಾದಿ ಪಕ್ಷದಲ್ಲಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್, ಮುಖ್ಯಮಂತ್ರಿ ಅಖಿಲೇಶ್ ಯಾದವ್ ಹಾಗೂ ಅವರ ಚಿಕ್ಕಪ್ಪ ಶಿವಪಾಲ್ ಯಾದವ್ ಮಧ್ಯೆ ತೀವ್ರ ತೆರನಾದ ಭಿನ್ನಮತ ಉಂಟಾಗಿದೆ.

ಸಾರ್ವಜನಿಕವಾಗಿ ತಂದೆ ಮತ್ತು ಚಿಕ್ಕಪ್ಪನ ವಿರುದ್ಧ ಹೇಳಿಕೆಗಳನ್ನು ನೀಡುವುದು ಬಿಟ್ಟು ತಂದೆಯೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳುವುದು ಸೂಕ್ತ. ಸಮಾಜವಾದಿ ಪಕ್ಷದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ನನಗೆ ನೋವು ತಂದಿವೆ ಎಂದು ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ.

ಮುಲಾಯಂ ಸಿಂಗ್ ಯಾದವ್ ಕೇವಲ ನನ್ನ ಆತ್ಮಿಯ ಗೆಳೆಯರಲ್ಲ. ದೇಶದ ಹಿರಿಯ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದಾರೆ. ಸಿದ್ದಾಂತದ ಆಧಾರಗಳ ಮೇಲೆ ಪಕ್ಷವನ್ನು ಕಟ್ಟಲು ತುಂಬಾ ಶ್ರಮಿಸಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದ್ದಾರೆ.

Comments are closed.