ರಾಷ್ಟ್ರೀಯ

ರಾಮ್ ಗೋಪಾಲ್ ಯಾದವ್ ರಿಂದ ಜೀವ ಬೆದರಿಕೆ: ಅಮರ್ ಸಿಂಗ್

Pinterest LinkedIn Tumblr

amarsinghstudioನವದೆಹಲಿ: ಉತ್ತರ ಪ್ರದೇಶ ಆಡಳಿತರೂಢ ಸಮಾಜವಾದಿ ಪಕ್ಷ(ಎಸ್ ಪಿ)ದಲ್ಲಿನ ಒಳಜಗಳ ಮತ್ತು ಭಿನ್ನಮತದ ಬಗ್ಗೆ ಕಡೆಗೂ ಮೌನ ಮುರಿದಿರುವ ಅಮರ್ ಸಿಂಗ್ ಅವರು, ಎಸ್ ಪಿ ನಾಯಕ ರಾಮ್ ಗೋಪಾಲ್ ಯಾದವ್ ಅವರಿಂದ ತಮಗೆ ಜೀವ ಬೆದರಿಕೆ ಇದೆ ಎಂದು ಆರೋಪಿಸಿದ್ದಾರೆ.
ಯಾದವ್ ಕುಟುಂಬ ಕಲಹಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧದ ಆರೋಪಗಳನ್ನು ಸ್ಪಷ್ಟವಾಗಿ ತಳ್ಳಿಹಾಕಿರುವ ಅಮರ್ ಸಿಂಗ್ ಅವರು, ರಾಮ್ ಗೋಪಾಲ್ ಯಾದವ್ ಅವರಿಂದ ತಮಗೆ ಬೆದರಿಕೆ ಇದ್ದು, ಈ ಸಂಬಂಧ ಗೃಹ ಸಚಿವರೊಂದಿಗೆ ಮಾತನಾಡಿ ರಕ್ಷಣೆ ನೀಡುವಂತೆ ಕೇಳಿಕೊಂಡಿದ್ದೇನೆ ಎಂದಿದ್ದಾರೆ.
ನನಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ ಮತ್ತು ರಾಮ್ ಗೋಪಾಲ್ ಯಾದವ್ ಅವರ ಬೆದರಿಕೆಯ ಹೇಳಿಕೆಯ ನಂತರ ತಾವು ಆತಂಕಗೊಂಡಿರುವುದಾಗಿ ತಿಳಿಸಿದ್ದಾರೆ.
ಪಕ್ಷದಲ್ಲಿನ ಭಿನ್ನಮತಕ್ಕೆ ಅಮರ್ ಸಿಂಗ್ ಅವರೇ ಕಾರಣ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಆರೋಪಿಸಿದ್ದರು. ಆದರೆ ಅವರ ಆರೋಪವನ್ನು ತಳ್ಳಿಹಾಕಿದ ಸಿಂಗ್, ಅಖಿಲೇಶ್ ಯಾದವ್ ಅವರು ಡಿಂಪಲ್ ಯಾದವ್ ಜೊತೆ ಮದುವೆಯಾಗುವುದಕ್ಕೆ ಅವರ ಇಡೀ ಕುಟುಂಬ ವಿರೋಧಿಸಿತ್ತು. ಹಾಗ ನಾನೊಬ್ಬನೇ ಅವರ ಬೆಂಬಲಕ್ಕೆ ನಿಂತಿದ್ದೆ ಎಂದು ಹಿಂದಿನ ದಿನಗಳನ್ನು ನೆನಪಿಸಿಕೊಂಡರು.
ನಾನು ಸಿಎಂ ಅಖಿಲೇಶ್ ಜೊತೆ ಇಲ್ಲ. ಆದರೆ ಮುಲಾಯಂ ಸಿಂಗ್ ಯಾದವ್ ಅವರ ಪುತ್ರ ಅಖಿಲೇಶ್ ಜೊತೆ ಸದಾ ಇರುತ್ತೇನೆ ಎಂದಿದ್ದಾರೆ.

Comments are closed.