ಆಗ್ರಾ : ಕಿರಿಯ ಸಹೋದ್ಯೋಗಿ- ಪ್ರೇಯಸಿಯ ಕತ್ತು ಹಿಸುಕಿ, ವಿಷದ ಚುಚ್ಚುಮದ್ದು ತೆಗೆದುಕೊಂಡು ಭಾರತೀಯ ಸೇನೆಯ ಲೆಫ್ಟಿನೆಂಟ್ ಕರ್ನಲ್ ಒಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ.
ಲೆಫ್ಟಿನೆಂಟ್ ಕರ್ನಲ್ ಟಿ.ಜಾಧವ್ (40) ಎಂಬವರನ್ನು ಮಥುರಾ ಮಿಲಿಟರಿ ಆಸ್ಪತ್ರೆಗೆ ಅನಸ್ತೇಶಿಯಾ ತಜ್ಞರಾಗಿ ಎರಡು ವರ್ಷದ ಹಿಂದೆ ನಿಯೋಜಿಸಲಾಗಿತ್ತು. ಶುಕ್ರವಾರ ಆಸ್ಪತ್ರೆಯ ನರ್ಸಿಂಗ್ ಸಹಾಯಕಿ ಲೆಫ್ಟಿನೆಂಟ್ ಜತೆ ಸುಧೀರ್ಘ ಪ್ರಯಾಣ ವಿಹಾರಕ್ಕೆ ತೆರಳಿದ್ದ ಅವರು ಯಮುನಾಪುರ ಬಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ಹೇಳಿವೆ.
ವಿವಾಹಿತರಾಗಿದ್ದ ಜಾಧವ್ಗೆ ಇಬ್ಬರು ಮಕ್ಕಳಿದ್ದಾರೆ. ಇವರು ಕಿರಿಯ ಅಧಿಕಾರಿ, ಡೆಹ್ರಾಡೂನ್ ಮೂಲದ ನರ್ಸಿಂಗ್ ಸಹಾಯಕಿ ಜತೆ ಪ್ರೇಮಸಂಬಂಧ ಹೊಂದಿದ್ದರು. ಆದರೆ ಆ ಕಿರಿಯ ಸಹೋದ್ಯೋಗಿಯ ವಿವಾಹ ನಿಶ್ಚಿತಾರ್ಥವಾಗಿರುವ ಹಿನ್ನೆಲೆಯಲ್ಲಿ ಸಂಬಂಧ ಕೊನೆಗೊಳಿಸಲು ಆಕೆ ಕೋರಿದ್ದ ಹಿನ್ನೆಲೆಯಲ್ಲಿ ಅಧಿಕಾರಿ, ಹಲವು ದಿನಗಳಿಂದ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.
“ಪ್ರಮುಖ ವಿಷಯ ಬಗ್ಗೆ ಚರ್ಚಿಸಬೇಕಾಗಿರುವುದರಿಂದ ದೂರ ಪ್ರಯಾಣ ಹೋಗೋಣ ಎಂದು ಜಾಧವ್ ಕರೆದಿದ್ದರು. ಶ್ರೀರಾಧಾ ಕಾಲನಿ ಬಳಿ ತಲುಪಿದಾಗ, ಆತ್ಮಹತ್ಯೆ ಮಾಡಿಕೊಳ್ಳೋಣ ಎಂದು ಹೇಳಿದರು. ಅವರನ್ನು ಆತ್ಮಹತ್ಯೆ ಮಾಡಿಕೊಳ್ಳದಂತೆ ಮನವೊಲಿಸಲು ಪ್ರಯತ್ನಿಸಿದಾಗ ಕತ್ತು ಹಿಸುಕಿದರು” ಎಂದು ದೂರು ನೀಡಲಾಗಿದೆ. ಸುದೀರ್ಘ ಹೋರಾಟದ ಬಳಿಕ ಜಾಧವ್ ಹಿಡಿತದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಯಿತು ಎಂದು ಮಹಿಳೆ ವಿವರಿಸಿದ್ದಾರೆ. ವಿಷಯುಕ್ತ ಇಂಜೆಕ್ಷನ್ ತೆಗೆದುಕೊಂಡು ಜಾಧವ್ ಆತ್ಮಹತ್ಯೆ ಮಾಡಿಕೊಂಡ ವಿಷಯವನ್ನು ಅವರು ಮೇಲಧಿಕಾರಿಗಳಿಗೆ ತಿಳಿಸಿದರು.
Comments are closed.