ಲಕ್ನೋ: ಉತ್ತರಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಭಾನುವಾರ ಹಿರಿಯ ಸಚಿವ ಹಾಗೂ ಸಂಬಂಧಿ ಶಿವಪಾಲ್ ಸಿಂಗ್ ಯಾದವ್ ಅವರನ್ನು ತಮ್ಮ ಸಚಿವ ಸಂಪುಟದಿಂದ ಕೈ ಬಿಟ್ಟಿದ್ದಾರೆ.
ಶಿವಪಾಲ್ ಅವರನ್ನು ಕೈಬಿಡುವುದರ ಜತೆ ಸಚಿವರಾದ ನಾರದ್ ರೈ, ಓಂ ಪ್ರಕಾಶ್, ಶದಾಬ್ ಫಾತಿಮಾ, ಗಾಯತ್ರಿ ಪ್ರಸಾದ್ ಪ್ರಜಾಪತಿ ಅವರನ್ನೂ ವಜಾ ಮಾಡಲಾಗಿದೆ.
ಈ ಸಚಿವರೆಲ್ಲರೂ ಸಮಾಜವಾದಿ ಪಕ್ಷ ರಾಜ್ಯ ಘಟಕದ ಅಧ್ಯಕ್ಷ ಶಿವಪಾಲ್ ಯಾದವ್ ಅವರ ಆಪ್ತರಾಗಿದ್ದಾರೆ.
ಪಕ್ಷದೊಳಗಿನ ಆಂತರಿಕ ಬಿಕ್ಕಟ್ಟು ಈ ಎಲ್ಲ ಬೆಳವಣಿಗಳಿಗೆ ಕಾರಣವಾಗಿದೆ.
Comments are closed.