ಶಬರಿ ಮಲ: ಟಿ.ಎಂ. ಉನ್ನಿಕೃಷ್ಣನ್ ಅವರನ್ನು ಶಬರಿ ಮಲೆ ಅಯ್ಯಪ್ಪ ಸ್ವಾಮಿ ದೇವಾಲಯದ ಮುಖ್ಯ ಅರ್ಚಕರನ್ನಾಗಿ ನೇಮಕ ಮಾಡಲಾಗಿದೆ.
ಹೊಸ ಮುಖ್ಯ ಅರ್ಚಕ ಉನ್ನಿಕೃಷ್ಣನ್ ಪಲಕ್ಕಾಡ್ ಜಿಲ್ಲೆಯ ಚೆರುಪ್ಲಸರಿ ಗ್ರಾಮದವರಾಗಿದ್ದಾರೆ. ಡ್ರಾ ಮೂಲಕ ಉನ್ನಿಕಷ್ಣನ್ ಅವರನ್ನು ಆಯ್ಕೆ ಮಾಡಲಾಗಿದೆ.
ಚಂಗಾಚೆರ್ರಿ ಮೂಲದ ಎಂ,ಎ ಮನು ಕುಮಾರ್ ಅವರನ್ನು ಮುಂದಿನ ಅರ್ಚಕರನ್ನಾಗಿ ಡ್ರಾ ಮೂಲಕ ನೇಮಕ ಮಾಡಲಾಗಿದೆ. ಮುಂದಿನ 1 ವರ್ಷದಲ್ಲಿ ಈ ಇಬ್ಬರು ಅರ್ಚಕರು ದೇವಾಲಯದ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಿದ್ದಾರೆ.
ಮಲಯಾಳಂ ಕ್ಯಾಲೆಂಡರ್ ಪ್ರಕಾರ ನವೆಂಬರ್ 16 ರಿಂದ ದೇವಾಲಯವನ್ನು ಭಕ್ತಾದಿಗಳಿಗೆ ತೆರೆಯಲಾಗುವುದು. ಇದು ಭಕ್ತಾದಿಗಳು ದೇವಾಲಯಕ್ಕೆ ಆಗಮಿಸುವ ಋತುಮಾನವಾಗಿದ್ದು, ಅಂದಿನಿಂದ ಈ ಹೊಸ ಅರ್ಚತರು ಕರ್ತವ್ಯ ನಿರ್ವಹಿಸಲಿದ್ದಾರೆ.
ರಾಷ್ಟ್ರೀಯ
Comments are closed.