ಮುಂಬೈ: ಯುಪಿಎ ಅಧಿಕಾರಾವಧಿಯಲ್ಲಿ ನಿರ್ದಿಷ್ಟ ದಾಳಿಗಳು ನಡೆದಿದ್ದವು ಎಂಬ ವಾದವನ್ನು ತಳ್ಳಿಹಾಕಿರುವ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್, ಈ ಹಿಂದೆ ಯಾವುದೇ ನಿರ್ದಿಷ್ಟ ದಾಳಿಗಳು ನಡೆದಿಲ್ಲ ಎಂದಿದ್ದಾರೆ.
‘ನಿರ್ದಿಷ್ಟ ದಾಳಿ ನಡೆದಿದ್ದು ಸೇನೆಯಿಂದಲೇ ಹೊರತು ಈ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿರುವ ರಾಜಕೀಯ ಪಕ್ಷಗಳಿಂದ ಅಲ್ಲ. ನಿರ್ದಿಷ್ಟ ದಾಳಿಯ ಯಶಸ್ಸು ಎಲ್ಲಾ ಭಾರತೀಯರಿಗೆ ಸಲ್ಲಬೇಕು. ಈ ಯಶಸ್ಸಿನ ಹೆಚ್ಚು ಪಾಲು ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರಕ್ಕೆ ಸಲ್ಲುತ್ತದೆ’ ಎಂದು ಅವರು ಹೇಳಿದ್ದಾರೆ.
‘ಎರಡು ವರ್ಷಗಳ ಕಾಲ ರಕ್ಷಣಾ ಸಚಿವನಾಗಿ ನನಗೆ ತಿಳಿದಿರುವಂತೆ ಈ ಹಿಂದೆ ಯಾವುದೇ ನಿರ್ದಿಷ್ಟ ದಾಳಿ ನಡೆದಿಲ್ಲ’ ಎಂದು ಪರಿಕ್ಕರ್ ತಿಳಿಸಿದ್ದಾರೆ.
Comments are closed.