ಲೂಧಿಯಾನ (ಪಂಜಾಬ್): ಪಂಜಾಬಿನ ಲೂಧಿಯಾನದಲ್ಲಿ ವಿಜಯದಶಮಿಯ ಕೊನೆಯ ದಿನವಾದ ಈದಿನ ಪಾಕ್ ಪ್ರಧಾನಿ ನವಾಜ್ ಷರೀಫ್ ಮತ್ತು ಭಯೋತ್ಪಾದಕ ಹಫೀಜ್ ಸಯೀದ್ ಪ್ರತಿಕೃತಿಗಳನ್ನು ಸುಡಲು ಸಿದ್ಧತೆಗಳು ನಡೆದಿವೆ.
ರಾವಣನಾಗಿ ನವಾಜ್ ಷರೀಫ್ ಮತ್ತು ಮೇಘನಾದನಾಗಿ ಹಫೀಜ್ ಸಯೀದ್ ಪ್ರತಿಕೃತಿಗಳನ್ನು ಸಿದ್ಧಗೊಳಿಸಿ ಇಡಲಾಗಿದ್ದು ಸಂಜೆ ಅವುಗಳನ್ನು ಸುಡಲಾಗುವುದು.
ಇದೇ ವೇಳೆಗೆ ದ್ವಾರಕಾದಲ್ಲಿ ವಿಜಯದಶಮಿ ಅಂಗವಾಗಿ ಪಾಕ್ ಪ್ರೇರಿತ ಭಯೋತ್ಪಾದನೆಯ ಪ್ರತಿಕೃತಿ ಸಿದ್ಧ ಪಡಿಸಲಾಗಿದ್ದು, ಸಂಜೆ ಇವು ರಾಮಬಾಣಕ್ಕೆ ತುತ್ತಾಗಲಿವೆ.
ವಿಜಯದಶಮಿಯ ದಿನ ಉತ್ತರ ಭಾರತದಲ್ಲಿ ರಾಮಲೀಲಾ ಅಂಗವಾಗಿ ದಶಹರ ರಾವಣ, ಮೇಘನಾದ ಮತ್ತು ಕುಂಭಕರ್ಣ ಪ್ರತಿಕೃತಿಗಳನ್ನು ರಾಮನ ವೇಷಧಾರಿ ಬಾಣ ಬಿಡುವ ಮೂಲಕ ಸುಟ್ಟು ಹಾಕುವ ಮೂಲಕ ‘ರಾವಣ ಸಂಹಾರವನ್ನು’ ನೆನಪಿಸುವ ಪದ್ಧತಿ ಅನೂಚಾನವಾಗಿ ನಡೆದು ಬಂದಿದೆ.
Comments are closed.