ರಾಷ್ಟ್ರೀಯ

ಮುಂದಿನ ಮುಖ್ಯಮಂತ್ರಿ ಕುರಿತು ವಿಲ್ ಬರೆದಿರುವ ಜಯಲಲಿತಾ

Pinterest LinkedIn Tumblr

Jayalalithaaಚೆನ್ನೈ: ತಮಿಳುನಾಡು ಸಿಎಂ ಜಯಲಲಿತಾ ಆರೋಗ್ಯ ಸ್ಥಿತಿ ಇನ್ನೂ ಸುಧಾರಿಸಿಲ್ಲ. ಇದರ ಮಧ್ಯೆ ಸಿಕ್ಕಾಪಟ್ಟೆ ಊಹಾಪೋಹಗಳು ಹರಿದಾಡ್ತಿವೆ. ಜಯಲಲಿತಾ ಅನಾರೋಗ್ಯದ ಹಿನ್ನೆಲೆಯಲ್ಲಿ ಪನೀರ್ ಸೆಲ್ವಂ ಹಂಗಾಮಿ ಸಿಎಂ ಆಗಿ ಅಧಿಕಾರ ಸ್ವೀಕರಿಸುತ್ತಾರೆ ಎಂಬ ಸುದ್ದಿಯೂ ಹಬ್ಬಿತ್ತು.ಆದ್ರೆ ಮೂಲಗಳ ಪ್ರಕಾರ ಜಯಲಲಿತಾ ನನ್ನ ಬಳಿಕ ಯಾರು ಸಿಎಂ ಆಗಬೇಕೆಂದು ವಿಲ್ ಬರೆದಿದ್ದಾರೆ ಎನ್ನಲಾಗಿದೆ.

ಜಯಾಲಲಿತಾ ಅತ್ಯಾಪ್ತರ ಕೈ ಸೇರಿರುವ ಆ ವಿಲ್‍ನಲ್ಲಿ ಸಮರ್ಥ ನಾಯಕತ್ವ ಹಾಗೂ ಜನರನ್ನು ಆಕರ್ಷಿಸಬಲ್ಲ ಓರ್ವ ವ್ಯಕ್ತಿ ಸಿಎಂ ಆಗಬೇಕೆಂದು ಜಯಾಲಲಿತಾ ಬಯಸಿದ್ದು, ದಕ್ಷಿಣ ಭಾರತದ ಸೂಪರ್‍ಸ್ಟಾರ್ ಅಜಿತ್ ಕುಮಾರ್ ಹೆಸರನ್ನು ಸೂಚಿಸಿದ್ದಾರಂತೆ. ಹೀಗಾಗಿ ಜಯಾ ಅವರು ಸದ್ಯಕ್ಕೆ ಚೇತರಿಸಿಕೊಳ್ಳದಿದ್ದರೆ ನಟ ಅಜಿತ್‍ಗೆ ಅನಿರೀಕ್ಷಿತವಾಗಿ ಸಿಎಂ ಪಟ್ಟ ಒಲಿಯಲಿದೆ ಎಂದು ರಾಷ್ಟ್ರೀಯ ಪತ್ರಿಕೆಯೊಂದು ವರದಿ ಮಾಡಿದೆ.

ಈ ಹಿಂದೆ ಅಕ್ರಮ ಆಸ್ತಿ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ಜಯಾ ಅನುಪಸ್ಥಿತಿಯಲ್ಲಿ ಪನ್ನೀರ್ ಸೆಲ್ವಂರನ್ನ ಹಂಗಾಮಿ ಸಿಎಂ ಮಾಡಲಾಗಿತ್ತು. ಆದರೆ ಈಗ ಪಕ್ಷದ ಮೂಲಗಳ ಪ್ರಕಾರ ಪನ್ನೀರ್ ಸೆಲ್ವಂ ಮುಂದಿನ ಸಿಎಂ ಆಗುವುದು ಸಂಶಯ. ಆದ್ರೆ ರಾಜಕೀಯದಲ್ಲಿ ಅನುಭವವೇ ಇಲ್ಲದ ಅಜಿತ್ ಕುಮಾರ್ ಏಕಾಏಕಿ ಸಿಎಂ ಆದರೆ ರಾಜ್ಯದ ಆಡಳಿತದ ಸ್ಥಿತಿ ಏನಾಗಬಹದು ಎಂಬ ಆತಂಕ ಈಗ ಸೃಷ್ಟಿಯಾಗಿದೆ.

ಸದ್ಯಕ್ಕೆ ಜಯಾ ಅನುಪಸ್ಥಿಯಲ್ಲಿ ಸರ್ಕಾರದ ಸಲಹೆಗಾರರಾದ ಶೀಲಾ ಬಾಲಕೃಷ್ಣನ್, ಮುಖ್ಯ ಕಾರ್ಯದರ್ಶಿ ಹಾಗೂ ಉನ್ನತ ಅಧಿಕಾರಿಗಳು ರಾಜ್ಯಕ್ಕೆ ಸಂಬಂಧಿಸಿದ ಪ್ರಮುಖ ನಿರ್ಧಾರಗಳನ್ನ ತೆಗೆದುಕೊಳ್ಳುತ್ತಿದ್ದಾರೆ.

Comments are closed.