ರಾಷ್ಟ್ರೀಯ

ಸರ್ಜಿಕಲ್ ದಾಳಿ ನಮ್ಮ ಗಮನಕ್ಕೆ ಬಂದಿಲ್ಲ: ವಿಶ್ವಸಂಸ್ಥೆ

Pinterest LinkedIn Tumblr

banki-moon

ನವದೆಹಲಿ (ಅ.02): ಗಡಿ ನಿಯಂತ್ರಣ ರೇಖೆ ಬಳಿ ಭಾರತ ನಡೆಸಿರುವ ಸರ್ಜಿಕಲ್ ದಾಳಿಯು ವಿಶ್ವಸಂಸ್ಥೆಯ ‘ಭಾರತ-ಪಾಕಿಸ್ತಾನ ಸೇನಾ ವೀಕ್ಷಕ ಸಮಿತಿ’ಯ ನೇರ ಗಮನಕ್ಕೆ ಬಂದಿಲ್ಲವೆಂದು ವಿಶ್ವಸಂಸ್ಥೆಯು ಹೇಳಿದೆ.

ಆದರೆ ಭಾರತವು ವಿಶ್ವಸಂಸ್ಥೆಯ ಹೇಳಿಕೆಯನ್ನು ತಳ್ಳಿಹಾಕಿದೆ.

ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ ವಿಶ್ವಸಂಸ್ಥೆ ಮಹಾ-ಕಾರ್ಯದರ್ಶಿಯವರ ವಕ್ತಾರ ಸ್ಟಿಫನ್ ಡುಜಾರ್ರಿಕ್, ಗಡಿ ನಿಯಂತ್ರಣ ರೇಖೆ ಬಳಿ ದಾಳಿ ನಡೆದಿರುವುದು ವೀಕ್ಷಕ ಸಮಿತಿಯ ಗಮನಕ್ಕೆ ಬಂದಿಲ್ಲವೆಂದು ಹೇಳಿದ್ದಾರೆ.

ಅವರ ಗಮನಕ್ಕೆ ಬಂದಿರಲಿ ಅಥವಾ ಇಲ್ಲದಿರಲಿ, ದಾಳಿ ನಡೆದಿರುವುದು ವಾಸ್ತವ ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ಪ್ರತಿನಿಧಿಯಾಗಿರುವ ಸೈಯದ್ ಅಕ್ಬರುದ್ದೀನ್ ಹೇಳಿದ್ದಾರೆ.

Comments are closed.