ರಾಷ್ಟ್ರೀಯ

ವಿದ್ಯುತ್ ಅವಘಡದಿಂದ ಸ್ವಲ್ಪದರಲ್ಲೇ ಪಾರಾದ ರಾಹುಲ್ ಗಾಂಧಿ

Pinterest LinkedIn Tumblr

rahul-main

ಆಗ್ರಾ : ಕಿಸಾನ್ ಮಹಾಯಾತ್ರೆ ವೇಳೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿದ್ಯುತ್ ಅವಘಡದಿಂದ ಸ್ವಲ್ಪದರಲ್ಲೇ ಪಾರಾಗಿರುವ ಘಟನೆ ನಿನ್ನೆ ನಡೆದಿದೆ.

ಕಿಸಾನ್‌ ರ್ಯಾಲಿಯ ಅಂಗವಾಗಿ ಆಗ್ರಾಕ್ಕೆ ಆಗಮಿಸಿದ್ದ ರಾಹುಲ್‌ ಗಾಂಧಿ, ಅಲ್ಲಿ ಮಹಾರಾಜ್‌ ಅಗ್ರಸೇನ್‌ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡುತ್ತಿದ್ದಾಗ ಸ್ಥಳದಲ್ಲಿ ಹಾದು ಹೋಗಿದ್ದ ವಿದ್ಯುತ್‌ ವೈರ್‌ವೊಂದು ರಾಹುಲ್‌ ತಲೆಗೆ ಬಡಿದಿದೆ. ಇದರಿಂದ ದಿಕ್ಕು ತೋಚದಂತಾದ ರಾಹುಲ್‌ ದಿಢೀರ್‌ನೆà ಹಿಂದಕ್ಕೆ ಬಂದಿದ್ದಾರೆ. ಭಯದಿಂದ ಗಾಬರಿಗೊಂಡು ಅವರು ಸಮತೋಲನ ತಪ್ಪಿದಾಗ ಸ್ಥಳದಲ್ಲಿದ್ದ ಭದ್ರತಾ ಪಡೆ ಸಿಬಂದಿ ಅವರನ್ನು ಹಿಡಿದುಕೊಂಡು ರಕ್ಷಿಸಿದ್ದಾರೆ.

ರಾಹುಲ್‌ಗೆ ತಲೆಗೆ ತಗುಲಿದ ಈ ವೈರ್‌ನಲ್ಲಿ ಅದೃಷ್ಟವಶಾತ್‌ ವಿದ್ಯುತ್‌ ಪ್ರವಹಿಸುತ್ತಿರಲ್ಲಿಲ್ಲ. ಹೀಗಾಗಿ ಅವರು ಬಚಾವ್‌ ಆಗಿದ್ದಾರೆ. ಈ ವೇಳೆ ರಾಜ್ಯ ಘಟಕದ ಅಧ್ಯಕ್ಷ ರಾಜ್‌ ಬಬ್ಬರ್‌ ಮತ್ತಿತರರಿದ್ದರು.

ಕೆಲ ದಿನಗಳ ಹಿಂದಷ್ಟೇ ಇದೇ ರೀತಿಯ ರ್ಯಾಲಿಯೊಂದರ ವೇಳೆ ವ್ಯಕ್ತಿಯೊಬ್ಬ ರಾಹುಲ್‌ ಮೇಲೆ ಶೂ ಎಸೆದಿದ್ದ. ಈ ವೇಳೆಯೂ ಎಸ್‌ಪಿಜಿ ಸಿಬಂದಿ, ಶೂ ರಾಹುಲ್‌ಗೆ ತಗಲದಂತೆ ನೋಡಿಕೊಂಡಿದ್ದರು.

Comments are closed.