ರಾಷ್ಟ್ರೀಯ

ಆರ್‌ಜೆಡಿ ಮುಖಂಡ ಮೊಹಮ್ಮದ್‌ ಶಹಾಬುದ್ದೀನ್‌ಗೆ ನೀಡಿದ್ದ ಜಾಮೀನು ಸುಪ್ರೀಂನಿಂದ ರದ್ದು

Pinterest LinkedIn Tumblr

shahahahaನವದೆಹಲಿ: ರಾಷ್ಟ್ರೀಯ ಜನತಾ ದಳದ (ಆರ್‌ಜೆಡಿ) ಮುಖಂಡ ಮೊಹಮ್ಮದ್‌ ಶಹಾಬುದ್ದೀನ್‌ಗೆ ನೀಡಿದ್ದ ಜಾಮೀನನ್ನು ಸುಪ್ರೀಂಕೋರ್ಟ್‌ ರದ್ದುಗೊಳಿಸಿದೆ.

ಬಿಹಾರದ ಸಿವಾನ್‌ನಲ್ಲಿ ನಡೆದ ಯುವಕನ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಶಹಾಬುದ್ದೀನ್‌ಗೆ ಪಟ್ನಾ ಹೈಕೋರ್ಟ್‌ ಜಾಮೀನು ನೀಡಿತ್ತು. ಇದನ್ನು ಪ್ರಶ್ನಿಸಿ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರು ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಿದ್ದರು.

‘ಶಹಾಬುದ್ದೀನ್‌ ಬಿಹಾರ ಪೊಲೀಸರಿಗೆ ಶರಣಾಗಬೇಕು. ಇಲ್ಲವೇ ಪೊಲೀಸರು ಕೂಡಲೇ ಆತನನ್ನು ವಶಕ್ಕೆ ಪಡೆಯಬೇಕು’ ಎಂದು ನ್ಯಾಯಮೂರ್ತಿ ಪಿ.ಸಿ. ಘೋಷ್‌ ಮತ್ತು ಅಮಿತಾವ್‌ ರಾಯ್‌ ಅವರಿದ್ದ ನ್ಯಾಯಪೀಠವು ಆದೇಶಿಸಿದೆ.

Comments are closed.