ಬೆಂಗಳೂರು: ಸೈನಿಕರ ಪರಿಹಾರ ನಿಧಿಗೆ ಒಂದು ರೂಪಾಯಿ ದೇಣಿಗೆ ನೀಡಿ ಎಂದು ಕೇಂದ್ರ ಸರ್ಕಾರ ದೇಶದ ಜನರನ್ನು ಕೇಳಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರಗಳನ್ನು ಬಳಸಿ ಫೇಸ್ಬುಕ್, ವಾಟ್ಸ್ಅಪ್ಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಲೇ ಪಂಗ ಮತ್ತು ತಿರುಪೆ ಸರ್ಕಾರ್ ಎಂಬ ಹ್ಯಾಶ್ ಟ್ಯಾಗ್ ಹಾಕಿ ಹಲವು ಪೋಸ್ಟ್ಗಳನ್ನು ಹಾಕಲಾಗಿದೆ.
ಕೇಂದ್ರ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ನೀಡಿದ್ದ ಆಶ್ವಾಸನೆಗಳನ್ನು ಈಡೇರಿಸಿಲ್ಲ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತ್ತ ಕೇಂದ್ರ ಸರ್ಕಾರ ದೇಶದ ನಾಗರಿಕರಿಂದ ಸೈನಿಕರ ನಿಧಿಗೆ ಒಂದು ರೂಪಾಯಿ ದೇಣಿಗೆ ಕೇಳಿರುವ ಬಗ್ಗೆಯೂ ಖಚಿತ ಮಾಹಿತಿಗಳಿಲ್ಲ. ಆದರೂ ಪೋಸ್ಟ್ಗಳು ಮಾತ್ರ ಹರಿದಾಡುತ್ತಿವೆ
Comments are closed.