ರಾಷ್ಟ್ರೀಯ

ಆರ್‌ಬಿಐ ಗವರ್ನರ್‌ ರಾಜನ್ 2ನೇ ಅವಧಿಗೆ ಅರ್ಹ; ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಅಭಿಮತ

Pinterest LinkedIn Tumblr

Digvijayಹೈದರಾಬಾದ್ (ಪಿಟಿಐ): ರಿಸರ್ವ್ ಬ್ಯಾಂಕ್‌ ಗವರ್ನರ್‌(ಆರ್‌ಬಿಐ) ರಘುರಾಂ ರಾಜನ್ ಅವರು ಸಮರ್ಥವಾಗಿದ್ದು, ಎರಡನೇ ಅವಧಿಗೆ ಹುದ್ದೆಯಲ್ಲಿ ಮುಂದುವರೆಯಲು ಅರ್ಹ ಎಂದು ಕಾಂಗ್ರೆಸ್ ಹಿರಿಯ ಮುಖಂಡ ದಿಗ್ವಿಜಯ್ ಸಿಂಗ್ ಅವರು ಬುಧವಾರ ಅಭಿಪ್ರಾಯಪಟ್ಟಿದ್ದಾರೆ.

‘ರಘುರಾಂ ರಾಜನ್ ಅವರು ಸಮರ್ಥ ವ್ಯಕ್ತಿ. ಆರ್‌ಬಿಐ ಗವರ್ನರ್ ಆಗಿ ಅವರು ಅತ್ತ್ಯುತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಅವರು ಎರಡನೇ ಅವಧಿಗೆ ಮುಂದುವರೆಯಲು ಅರ್ಹ’ ಎಂದು ರಾಜನ್ ಮುಂದುವರಿಕೆ ಕುರಿತ ಪ್ರಶ್ನೆಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಸಿಂಗ್ ಪ್ರತಿಕ್ರಿಯಿಸಿದ್ದಾರೆ.

‘‌ರಾಜನ್‌ ಮಾನಸಿಕವಾಗಿ ಸಂಪೂರ್ಣ ಭಾರತೀಯ ಅಲ್ಲ’ ಎಂಬ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಅವರ ಟೀಕೆ ಕುರಿತ ಪ್ರಶ್ನೆಗೆ ಸಿಂಗ್, ‘ಮತ್ತೆ ಸ್ವಾಮಿ ಏನು?’ ಎಂದು ಪ್ರಶ್ನಿಸಿದ್ದಾರೆ.

Comments are closed.