ಹೊಸದಿಲ್ಲಿ: ಯುವತಿಗೆ ಕಿರುಕುಳ ನೀಡಿದ ಆರು ಮಂದಿಯ ಗುಂಪು ಅದನ್ನು ತಡೆಯಲು ಬಂದ ಆಕೆಯ ತಾಯಿಗೂ ಥಳಿಸಿರುವ ಘಟನೆ ಆನಂದ್ ಪರ್ಬತ್ ಪ್ರದೇಶದಲ್ಲಿ ನಡೆದಿದೆ.
ಶನಿವಾರ ಸಂಜೆ ಪಾರ್ಕ್ನಲ್ಲಿ ಈ ಘಟನೆ ನಡೆದಿರುವುದಾಗಿ ಸಂತ್ರಸ್ತೆ ದೂರು ನೀಡಿದ್ದು, ಆರೋಪಿಗಳನ್ನು ಬಂಧಿಸಿದ್ದ ಪೊಲೀಸರು ಆವತ್ತೇ ಬಿಡುಗಡೆಗೊಳಿಸಿದ್ದರು.
‘ಅದೇ ದಿನ ರಾತ್ರಿ ಮನೆ ಎದುರು ಬಂದ ಆ ಗುಂಪು ತನ್ನನ್ನು ಮನೆಯಿಂದ ಹೊರಗೆ ಕರೆದಿದೆ. ಆದರೆ ಹೊರ ಬರದ ಕಾರಣ ವಾಪಸಾಗಿತ್ತು. ಭಾನುವಾರ ಮತ್ತೆ ಮನೆಯತ್ತ ಬಂದಿದ್ದ ಗುಂಪು ಥಳಿಸಿ ದೂರು ವಾಪಸ್ ಪಡೆಯದಿದ್ದರೆ ಇಡೀ ಮನೆಯವರನ್ನು ಕೊಲ್ಲುವುದಾಗಿ ಬೆದರಿಸಿದೆ. ಹೇಗೋ ಮನೆಯೊಳಗೆ ಹೋದೆ. ಕೆಲವೇ ಕ್ಷಣಗಳಲ್ಲಿ ಅವರು ಬೆಲ್ಟ್ ಮತ್ತು ರಾಡ್ ಹಿಡಿದು ಮನೆಯಿಂದ ಹೊರಗೆಳೆದು ಥಳಿದ್ದಾರೆ.ಆಗ ಬಿಡಿಸಲು ಬಂದ ತಾಯಿಗೂ ಆ ನೀಚರು ಹೊಡೆದರು. ಇಬ್ಬರಿಗೂ ಕಲ್ಲಿನಿಂದ ಹೊಡೆದರು. ಸಹಾಯಕ್ಕೆ ಬಂದ ಪಕ್ಕದ ನಿವಾಸಿಗಳಿಗೂ ಬೆದರಿಕೆ ಒಡ್ಡಿದರು,’ಎಂದು ಸಂತ್ರಸ್ತೆ ದೂರಿನಲ್ಲಿ ವಿವರಿಸಿದ್ದಾರೆ.
ಈಗ ನೀಡಿರುವ ದೂರಿಗೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಿದ್ದು, ಉಳಿದವರನ್ನೂ ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.
Comments are closed.