ಚೆನ್ನೈ/ತಿರುವನಂತಪುರಂ: ಇದೀಗ ತಾನೆ ಚುನಾವಣೆ ಕಾವು ಮುಗಿದಿರುವ ತಮಿಳುನಾಡು ಹಾಗೂ ಕೇರಳದಲ್ಲಿ ಮಂಗಳವಾರ ಸುರಿದಿರುವ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಮುಂಬರುವ 48 ತಾಸುಗಳಲ್ಲಿ ನೆರೆ ಹಾವಳಿ ಉಂಟಾಗುವ ಭೀತಿ ಇದೆ ಎಂದು ರಾಷ್ಟ್ರೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಕಳೆದ ಬಾರಿಯ ಭಾರಿ ಮಳೆಗೆ ಚೆನ್ನೈನಲ್ಲಿ ಉಂಟಾಗಿದ್ದ ಪ್ರವಾಹ ಪರಿಸ್ಥಿತಿ ಹಸಿಯಾಗಿರುವಾಗಲೇ ಮತ್ತೆ ಅದೇ ಪರಿಸ್ಥಿತಿ ಮರುಕಳಿಸುವ ಸೂಚನೆ ಎದುರಾಗಿದೆ. ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಕೇರಳ ಹಾಗೂ ತಮಿಳುನಾಡಿನಲ್ಲಿ ಮಳೆಯುಂಟು ಮಾಡಲು ಕಾರಣವಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
Comments are closed.