ರಾಷ್ಟ್ರೀಯ

ಕನ್ಯಾಕುಮಾರಿಯಲ್ಲಿ ಬಿಜೆಪಿ ಪರ ಪಾದ್ರಿಗಳ ಪ್ರಚಾರ

Pinterest LinkedIn Tumblr

fatherಕನ್ಯಾಕುಮಾರಿ: ನಾಗರಕೋಯಿಲ್‌ನ ಬಿಜೆಪಿ ಅಭ್ಯರ್ಥಿ ಎಂ.ಆರ್‌ ಗಾಂಧಿ ಪರ ರೋಮನ್‌ ಕ್ಯಾಥೋಲಿಕ್ ಫಾದರ್‌ ಡೇವಿಡ್‌ ಆರ್‌ ಥಾಮಸ್‌ ಪ್ರಚಾರ ಮಾಡುತ್ತಿರುವುದು ಎಲ್ಲರ ಹುಬ್ಬೇರಿಸಿದೆ.

ಚರ್ಚಿನ ಕಟ್ಟುಪಾಡುಗಳ ಧಿಕ್ಕರಿಸಿರುವ ಕ್ರಿಶ್ಚಿಯನ್‌ ಸಮುದಾಯದ ಕೆಲ ಧರ್ಮಗುರುಗಳು, ಜೀವ ಬೆದರಿಕೆಯನ್ನೂ ನಿರ್ಲಕ್ಷಿಸಿ ಹಿಂದುತ್ವ ಪಕ್ಷದ ಪರ ಪ್ರಚಾರದಲ್ಲಿ ತೊಡಗಿದ್ದಾರೆ.

ಯಾವ ಪಕ್ಷಕ್ಕೆ ಮತ ಹಾಕಬೇಕು ಎಂಬ ಬಗ್ಗೆ ಸಭೆಯಲ್ಲಿ ಮುಕ್ತ ಸಂದೇಶ ನೀಡಲಾಗುವುದು ಈ ವಿಚಾರದಲ್ಲಿ ಯಾವುದೇ ಮುಚ್ಚುಮರೆ ಇರುವುದಿಲ್ಲ ಎಂದು ಕನ್ಯಾಕುಮಾರಿಯ ಕ್ಯಾಥೋಲಿಕ್ ಫಾದರ್‌ ವಲೆರಿಯನ್‌ ಹೇಳಿದ್ದಾರೆ. ‘ ಡಿಎಂಕೆ-ಕಾಂಗ್ರೆಸ್‌ ಮೈತ್ರಿಕೂಟವನ್ನು ರೋಮನ್‌ ಕ್ಯಾಥಲಿಕ್‌ ಚರ್ಚ್‌ ಬೆಂಬಲಿಸುವ ಸಂಬಂಧ ನೋಟಿಸ್‌ ಹೊರಡಿಸಲಾಗಿತ್ತು,’ಎಂದು ಫಾದರ್‌ ಹೇಳಿದ್ದಾರೆ.

ಆದರೆ, ಗಡಿ ಜಿಲ್ಲೆಯಲ್ಲಿ ಕನ್ಯಾಕುಮಾರಿಯಲ್ಲಿ ಅಚ್ಚರಿ ಎಂಬಂತೆ ರೋಮನ್‌ ಕ್ಯಾಥೋಲಿಕ್‌ ಹಾಗೂ ಪೆಂಟಕೋಸ್ಟಲ್‌ ಕಾಂಗ್ರೆಗೇಷನ್‌ ಬಿಜೆಪಿ ಪರವಹಿಸಿದೆ. ಕೇರಳದ ಕೆಲ ಆರ್‌ಸಿ ಪಾದ್ರಿಗಳು ಮುಕ್ತವಾಗಿ ಬಿಜೆಪಿಗೆ ಬೆಂಬಲ ಸೂಚಿಸಿರುವ ಬೆನ್ನಿಗೇ, ಕನ್ಯಾಕುಮಾರಿಯಲ್ಲೂ ಕೇಸರಿ ಪಕ್ಷಕ್ಕೆ ಆರ್‌ಸಿ ಪಾದ್ರಿಗಳು ಜೈ ಎಂದಿದ್ದಾರೆ.

‘ನನಗೆ ಪಾಸ್‌ಪೋರ್ಟ್‌ ಬೇಕಿದ್ದಾಗ ಬಿಜೆಪಿಯ ಪೊನ್‌ ರಾಧಾಕೃಷ್ಣನ್‌ ಸಹಾಯ ಮಾಡಿದ್ದರು. ಹಾಗಾಗಿ ಪ್ರತಿ ಚುನಾವಣೆಯಲ್ಲಿ ಅವರಿಗಾಗಿ ಪಕ್ಷದ ಪರ ಪ್ರಚಾರ ಮಾಡುತ್ತಾನೆ,’ಎನ್ನುತ್ತಾರೆ ಪಾಸ್ಟರ್ ಟಿ. ಕ್ಲಾರೆಟ್‌. ಬಿಜೆಪಿ ಪರ ಪ್ರಚಾರ ಮಾಡುತ್ತಿರುವ ಇವರಿಗೆ ಜೀವ ಬೆದರಿಕೆಗಳು ಬಂದಿವೆಯಂತೆ.

Write A Comment