ಕೊಲ್ಕತ್ತಾ: ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿಯ ಸೆಮಿಫೈನಲ್ ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ಎಂಎಸ್ ಧೋನಿ ನಾಯಕತ್ವ ಸರಿ ಇರಲಿಲ್ಲ ಎಂದು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ.
ವಿಶ್ವಶ್ರೇಷ್ಠ ಬೌಲರ್ ಆಗಿರುವ ಆರ್ ಅಶ್ವಿನ್ ಅವರಿಗೆ ಸೆಮಿಫೈನಲ್ ಪಂದ್ಯದಲ್ಲಿ ಕೇವಲ ಎರಡು ಓವರ್ ಗಳನ್ನು ಮಾತ್ರ ನೀಡಲಾಗಿದೆ. ದುಬಾರಿಯಾದ ಜಡೇಜಾ ಹಾಗೂ ಹಾರ್ದಿಕ್ ಪಟೇಲ್ ಗೆ ಹೆಚ್ಚು ಓವರ್ ಗಳನ್ನು ನೀಡಲಾಗಿತ್ತು. ಬದಲಿಗೆ ಅಶ್ವಿನ್ ಅವರಿಗೆ ಇನ್ನೆರಡು ಓವರ್ ಮಾಡಲು ನೀಡಿದ್ದರೆ ಪಂದ್ಯದ ಗತಿ ಬದಲಾಗುತ್ತಿತ್ತೆನೋ ಎಂದು ಸೆಹ್ವಾಗ್ ಹೇಳಿದ್ದಾರೆ.