ನವದೆಹಲಿ: ಪಕ್ಷಕ್ಕೆ ಕೆಟ್ಟ ಹೆಸರು ತಂದಿರುವ ಬಿಜೆಪಿ ಶಾಸಕ ಗಣೇಶಜೋಶಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಂದ್ರ ಮಂತ್ರಿ ಮನೇಕಾ ಗಾಂಧಿ ಅವರು ಪಕ್ಷದ ವರಿಷ್ಠರನ್ನು ಆಗ್ರಹಪಡಿಸಿದ್ದಾರೆ.
ಪ್ರತಿಭಟನೆ ಕಾಲಕ್ಕೆ ಉತ್ತರ ಪ್ರದೇಶದ ಶಾಸಕ ಗಣೇಶ್ ಜೋಶಿ ಅಶ್ವಾರೋಹಿ ಪೊಲೀಸ್ ಪಡೆಗೆ ಸೇರಿದ ಕುದುರೆಯೊಂದನ್ನು ಥಳಿಸಿದ್ದರಿಂದ ಕುದುರೆಯ ಕಾಲು ಮುರಿದಿತ್ತು. ಆದರೆ ತಾವು ನೆಲಕ್ಕೆ ಹೊಡೆಯುತ್ತಿದ್ದುದಾಗಿ ಕಳಂಕಿತ ಶಾಸಕ ಪ್ರತಿಕ್ರಿಯೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಕುದುರೆಗೆ ಹೊಡೆಯುವ ದೃಶ್ಯಾವಳಿಗಳು ಟಿವಿ ವಾಹಿನಿಗಳಲ್ಲಿ ಪ್ರಸಾರಗೊಂಡಿದ್ದರೂ ಕುದುರೆ ಬಿದ್ದಾಗ ತಾವು ಸ್ಥಳದಲ್ಲಿ ಇರಲಿಲ್ಲ ಎಂದು ಜೋಶಿ ಹೇಳಿಕೊಂಡಿದ್ದನ್ನು ಇಲ್ಲಿ ನೆನೆಯಬಹುದು.